ಶ್ರೀಮತಿ ಜಾನಕಿ ದೇರಣ್ಣ ಗೌಡ ಕಾನಡ್ಕರವರ ವೈಕುಂಠ ಸಮಾರಾಧನೆ

0

ಅಮರಪಡ್ನೂರು ಗ್ರಾಮದ ಕಾನಡ್ಕ ದ ಶ್ರೀಮತಿ ಜಾನಕಿ ದೇರಣ್ಣ ಗೌಡರವರು ಅ.05 ರಂದು ನಿಧನರಾಗಿದ್ದು ಅವರ ಶ್ರದ್ಧಾಂಜಲಿ ಸಭೆ ಮತ್ತು ವೈಕುಂಠ ಸಮಾರಾಧನೆಯು ಅ.24 ರಂದು ಕಾನಡ್ಕ ಮನೆಯಲ್ಲಿ ನಡೆಯಿತು. ಯತೀಶ್ ಗೌಡ ಹಿರಿಯಡ್ಕ, ಉಮೇಶ್ ಗೌಡ ಕುರೋಡಿ,ಪರಮೇಶ್ವರ ಬಿಳಿಮಲೆಯವರು ಜಾನಕಿ ಕಾನಡ್ಕ ರವರ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು. ಆಗಮಿಸಿದ ನೂರಾರು ಜನರು ಜಾನಕಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಮೃತರ ಪುತ್ರರಾದ ಶಿವರಾಮ ಕಾನಡ್ಕ, ಭವಾನಿಶಂಕರ ಕಾನಡ್ಕ,ತೀರ್ಥೆಶ್ವರ ಕಾನಡ್ಕ ಪುತ್ರಿ ಶ್ರೀಮತಿ ವಿಮಲ ಸಂಜೀವ ಗೌಡ ನಿನ್ನಿಕಲ್ಲು, ಸೊಸೆಯಂದಿರಾದ ಶ್ರೀಮತಿ ಮೋಹನಾಂಗಿ ಶಿವರಾಮ,ಶ್ರೀಮತಿ ಕಸ್ತೂರಿ ಭವಾನಿಶಂಕರ, ಶ್ರೀಮತಿ ಲತಾ ಪುರುಷೋತ್ತಮ, ಶ್ರೀಮತಿ ಭಾರತಿ ತೀರ್ಥೆಶ್ವರ,ಅಳಿಯ ಸಂಜೀವ ಗೌಡ ನಿನ್ನಿಕಲ್ಲು ಮೊಮ್ಮಕ್ಕಳು,ಮರಿಮಕ್ಕಳು, ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದರು.