ಕೀರ್ತನ್ ಶೆಟ್ಟಿ ಸುಳ್ಯ ತಂಡದ “ಗ್ರಹಚಾರ” ಆಲ್ಬಮ್ ಸಾಂಗ್ ಟ್ರೈಲರ್ ಬಿಡುಗಡೆ

0

ಸುಳ್ಯ: ತಪಸ್ಯ ಮೀಡಿಯಾ ಅರ್ಪಿಸುತ್ತಿರುವ ಕೀರ್ತನ್ ಶೆಟ್ಟಿ ನಿರ್ದೇಶಸಿದ ‘ಗ್ರಹಚಾರ’ ಎಂಬ ಹೊಸ ಆಲ್ಬಮ್ ಸಾಂಗ್ ನ ಟ್ರೈಲರ್ ಶುಕ್ರವಾರ 27 ಅಕ್ಟೋಬರ್ ನಂದು ಸುಳ್ಯ ದಸರಾ ಶಾರದೋತ್ಸವ ಕಾರ್ಯಕ್ರಮದಲ್ಲಿ ಸುಳ್ಯದ ಶಾಸಕಿ ಭಾಗೀರಥಿ ಮುರಳ್ಯ ಬಿಡುಗಡೆಗೊಳಿಸಿದರು‌.

ಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಎಸ್ ಅಂಗಾರ, ಚಲನಚಿತ್ರ ನಿರ್ದೇಶಕ ಸಂತೋಷ್ ಕೊಡಂಗೇರಿ, ರಮನಾಥ್ ರೈ ,ಚಿದನಂದ,ನಾರಯಣ ಕೇಕ್ಕಡ ,ಗೋಕುಲ್ ದಾಸ್ ನಿರ್ಮಾಪಕರಾದ ಅಜಿತ್ ಬಿ ಟಿ, ಛಾಯಾಗ್ರಾಹಕರಾದ ಅನಿಲ್ ರೈ ಪೆರಿಗೇರಿ ಹಾಗೂ ತಂಡದ ಕಲಾವಿದರ ದೀಪಕ್ ರೈ ಕುಂಬ್ರ,ಮನೋಜ್ ,ಸುಪ್ರೀತಾ ಕೆ ಎಸ್ ,ಇಶಾನ್ ಬಿ ಎ ,ವಿಷ್ಣು ನಾಗ್ ಶೇಟ್
ತೇಜಸ್ ಚಿಮ್ಮೂರು,ಅಕ್ಷಯ್ ನವೀನ್ ಉಪಸ್ಥಿತರಿದ್ದರು ..