ನೀರಬಿದಿರೆ; ನೆರೆಮನೆಯವನಿಗೆ ಕತ್ತಿಯಿಂದ ಕಡಿತ- ಪೋಲಿಸ್ ಆಗಮನ

0


ಕುಡಿದ ಮತ್ತಿನಲ್ಲಿ ನೆರೆ ಮನೆಯ ವ್ಯಕ್ತಿ ಗೆ ಕತ್ತಿಯಿಂದ ಕಡಿದ ಘಟನೆ ದುಗ್ಗಲಡ್ಕ ಸಮೀಪದ ನೀರಬಿದಿರೆ ಯಿಂದ ಇಂದು ಸಂಜೆ ನಡೆದಿದೆ.


ನೀರಬಿದಿರೆ ನಿವಾಸಿ ಪ್ರಶಾಂತ್ ಡಿ ಸೋಜಾರವರು ನೆರೆಮನೆಯ ಜಾನ್ ಡಿ.ಸೋಜಾರವರ ಬೆನ್ನಿಗೆ ಕಡಿದಿರುವುದಾಗಿ ವರದಿಯಾಗಿದ್ದು, ಬೆನ್ನಿಗೆ ಗಾಯವಾಗಿರುವ ಜಾನ್ ರವರು ಸುಳ್ಯ ಸರಕಾರಿ ಆಸ್ಪತ್ರೆ ಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಪೋಲಿಸರು ಆಗಮಿಸಿ, ಕೇಸು ದಾಖಲಾಗಿರುವುದಾಗಿ ತಿಳಿದುಬಂದಿದೆ.