ಅರಂತೋಡು: ಅಡ್ತಲೆಯಲ್ಲಿ ಅಡಿಕೆ ಕಳ್ಳತನ

0

ಅರಂತೋಡು ಗ್ರಾಮದ ಅಡ್ತಲೆಯ ಮೋಹನ್ ಪಂಜದಬೈಲು ಎಂಬವರ ಅಡಿಕೆ ತೋಟದಿಂದ ಹಣ್ಣಡಿಕೆ ಕಳ್ಳತನ ಆಗಿರುವ ಘಟನೆ ‌ನ.4ರಂದು ನಡೆದಿದೆ.
ಮೋಹನ್ ರವರು ಇಂಟರ್ ಮಂಗಳ ಅಡಿಕೆ ಕೃಷಿ ಮಾಡಿದ್ದು ಅಡಿಕೆ ಗೊನೆಗಳು ಕೈಗೆಟುಕುವ ಎತ್ತರದಲ್ಲಿದ್ದು, ಐದಾರು ಅಡಿಕೆ ಮರಗಳಿಂದ ಪೂರ್ತಿ ಅಡಿಕೆ ಗೊನೆಗಳನ್ನು, ಇನ್ನು ಕೆಲವು ಮರಗಳಿಂದ ಹುಡುಕಿ ಹಣ್ಣಾದ ಅಡಿಕೆಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿದುಬಂದಿದೆ.

ಕೃಷಿ ಕಾರ್ಯಕ್ಕಾಗಿ ಅತ್ಯಂತ ಕಷ್ಟಪಟ್ಟು ಬೆಳೆದ ಅಡಿಕೆ ಫಸಲನ್ನು ಕಳ್ಳರು ಕಳ್ಳತನ ಮಾಡಿರುವುದರಿಂದ ನೊಂದಿರುವ ಮೋಹನ್ ಅವರು ಅಡಿಕೆ ಕದ್ದವರಿಗೆ ಮತ್ತು ಕದ್ದ ಮಾಲನ್ನು ವ್ಯಾಪಾರ ಮಾಡಿದವರಿಗೆ ಶಿಕ್ಷೆ ದೊರೆಯಲೆಂದು ಕೆಲವು ಕಾರಣಿಕ ಹಾಗೂ ಸತ್ಯ ಸ್ಥಳಗಳಲ್ಲಿ ಈ ಬಗ್ಗೆ ಹರಿಕೆ ಪ್ರಾರ್ಥನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.