ರೈತ ಯುವಕ ಮಂಡಲ ಏನೆಕಲ್ ಆಶ್ರಯದಲ್ಲಿ ದೀಪಾವಳಿ ಹಬ್ಬದ ಕ್ರೀಡಾಕೂಟ

0

ರೈತ ಯುವಕ ಮಂಡಲ ಏನೆಕಲ್ ಇದರ ಆಶ್ರಯದಲ್ಲಿ ಏನೇಕಲ್ಲಿನ ಗ್ರಾಮಸ್ಥರಿಗೆ ದೀಪಾವಳಿ ಹಬ್ಬದ ಕ್ರೀಡಾಕೂಟ ನ.12 ರಂದು ನಡೆಯಿತು.

ಕ್ರೀಡಾಕೂಟ ಉದ್ಘಾಟನಾ ಸಭೆಯ ಅಧ್ಯಕ್ಷತೆಯನ್ನು ರೈತ ಯುವಕ ಮಂಡಲದ ಅಧ್ಯಕ್ಷರಾದ ಮನುದೇವ್ ಪರಮಲೆ ವಹಿಸಿದರು. ಕಾರ್ಯಕ್ರಮವನ್ನು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ತಾಪನ ಸಮಿತಿ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಿಟಿಯು ಪ್ರಾದೇಶಿಕ ನಿರ್ದೇಶಕರಾದ ಡಾ l ಶಿವಕುಮಾರ್ ಹೊಸಳಿಕೆ, ಸುಬ್ರಹ್ಮಣ್ಯ ಠಾಣಾಧಿಕರಿಗಳಾದ ಕಾರ್ತಿಕ್, ಏನೆಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ಶ್ರೀಮತಿ ವೇದಾವತಿ ಕೊಟಿಗೌಡನಮನೆ, ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯ ಅಶೋಕ್ ನೆಕ್ರಾಜೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭ ಸರಕಾರಿ ಉದ್ಯೋಗದಿಂದ ನಿವೃತರಾದ ಹಿರಿಯರನ್ನು ಹಾಗೂ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ ಗರಿಷ್ಟ ಅಂಖ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ನಡುವೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಂಜೆ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪಂಚಾಯತ್ ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಸದಸ್ಯರುಗಳಾದ ಮೋಹನ್ ಕೋಟಿಗೌಡನಮನೆ, ಜಯಂತಿ ಪರಮಲೆ, ಭವ್ಯ ಜೇನುಕೋಡಿ, ಶಿವರಾಮ್ ನೆಕ್ರಾಜೆ ಬಹುಮಾನವನ್ನು ವಿತರಿಸಿದರು. ವೇದಿಕೆಯಲ್ಲಿ ಏನೆಕಲ್,ರೈತ ಯುವಕ ಮಂಡಲದ ಕಟ್ಟಡ ರಚನಾ ಸಮಿತಿ ಅಧ್ಯಕ್ಷರಾದ ರಾಮಕೃಷ್ಣ ಮಲ್ಲಾರ, ನ ಡಾ. ಭಾನುಮತಿ ಹರಿಶ್ಚಂದ್ರ ಚಿದ್ಗಲ್, ಲೋಕೇಶ್ ಚಿದ್ಗಲ್, ಶೇಷಪ್ಪ ಮಾದನಮನೆ, ಹೊನ್ನಪ್ಪ ಕಟ್ಟ, ಉಮೇಶ್ ಹೊಸಳಿಕೆ, ಬಚ್ಚನಾಯಕ ದೈವಸ್ಥಾನದ ಪ್ರಧಾನ ಪೂಜಾರಿಗಳಾದ ರಾಧಾಕೃಷ್ಣ ಪೂಜಾರಿಮನೆ, ಊರು ಗೌಡರುಗಳು, ಯುವಕ ಮಂಡಲದ ಕಾರ್ಯದರ್ಶಿ ಸಾತ್ವಿಕ್ ಚಿದ್ಗಲ್ ಉಪಸ್ಥಿತರಿದ್ದರು. ರಕ್ಷಿತ್ ಪರಮಲೆ ಸ್ವಾಗತಿಸಿ, ವಿಜಯ ಕುಮಾರ್ ಅಮೈ ನಿರೂಪಣೆಯನ್ನು ಮಾಡಿ, ಸಾತ್ವಿಕ್ ಚಿದ್ಗಲ್ ವಂದಿಸಿದರು.