ಅಯ್ಯನಕಟ್ಟೆ: ರಸ್ತೆ ಹೊಂಡಕ್ಕೆ ಸ್ಕೂಟಿ ಬಿದ್ದು ಯುವತಿಗೆ ಗಾಯ

0

ದ್ವಿಚಕ್ರ ವಾಹನ ಸವಾರರಿಗೆ ಯಮರೂಪಿಯಾಗಿ ಕಾಡುತ್ತಿರುವ ರಸ್ತೆ ಹೊಂಡಗಳು

ಎಚ್ವೆತ್ತುಕೊಳ್ಳದ ಇಲಾಖೆ

ಬೆಳ್ಳಾರೆ – ನಿಂತಿಕಲ್ಲು ಮುಖ್ಯ ರಸ್ತೆಯಲ್ಲಿ ಅಯ್ಯನಕಟ್ಟೆ ಬಸ್ ನಿಲ್ದಾಣದ ಸಮೀಪ ರಸ್ತೆಯ ಮಧ್ಯ ಭಾಗದಲ್ಲಿದ್ದ ಹೊಂಡಕ್ಕೆ ದ್ವಿಚಕ್ರ ವಾಹನದ ಎದುರಿನ ಚಕ್ರ ಬಿದ್ದು ಸ್ಕೂಟಿ ಸವಾರೆ ಜಖಂಗೊಂಡ ಘಟನೆ ಇಂದು ಸಂಜೆ‌‌ ನಡೆದಿದೆ. ಬೆಳ್ಳಾರೆ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ಯುವತಿಬ ಸಂಜೆ ಕೆಲಸ ಬಿಟ್ಟು ಮನೆಗೆ ಹೋಗುವಾಗ ಈ ಘಟನೆ ನಡೆದಿದೆ. ಅಪಘಾತ ನಡೆದಾಗ ಸ್ಥಳದಲ್ಲಿದ್ದ ಯುವಕರು ಯುವತಿಯನ್ನು ಆರೈಕೆ ಮಾಡಿ ಬಳಿಕ ಗಣೇಶ್ ಪೊಸೋಡು ಎಂಬವರು ತಮ್ಮ ಇಕೋ ವಾಹನದಲ್ಲಿ ಬೆಳ್ಳಾರೆ ಪ್ರಶಾಂತಿ ಕ್ಲಿನಿಕ್ ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಬಳಿಕ ಯುವತಿಯ ಮನೆಯವರಿಗೆ ಮಾಹಿತಿ ನೀಡಿದರು.