ಪೆರಾಜೆ: ಸಾರ್ವಜನಿಕ ಶ್ರೀ ಶಾರದಾಂಬೋತ್ಸವ ಸಮಿತಿ ಪುನರಚನೆ

0

ಪೆರಾಜೆ ಸಾರ್ವಜನಿಕ ಶ್ರೀ ಶಾರದಾಂಬೋತ್ಸವ ಸಮಿತಿಯ ವಾರ್ಷಿಕ ಮಹಾಸಭೆಯು ಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನ.11ರಂದು ಜರುಗಿತು.
ಸಮಿತಿಯ ಅಧ್ಯಕ್ಷ ವೇದವ್ಯಾಸ ತಂತ್ರಿ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಉಮೇಶ ಕುಂಬಳಚೇರಿ ಅವರು ಸ್ವಾಗತಿಸಿ, ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.

ಬಳಿಕ ನೂತನ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ವೇದವ್ಯಾಸ ತಂತ್ರಿ ಅವರು ಪುನರಾಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ತಿರುಮಲೇಶ್ವರ ಬಿ.ಎಂ. ಕೋಶಾಧಿಕಾರಿ ಮುಖ್ಯಪ್ರಾಣ ಕಲ್ಲೂರಾಯ, ಉಪಾಧ್ಯಕ್ಷರಾಗಿ ರಮೇಶ್ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ
ನಾಗೇಶ್ ಕುಂಡಾಡು, ನೂತನ ಸದಸ್ಯರುಗಳಾಗಿ ಪ್ರವೀಣ್ ಮಜಿಕೋಡಿ, ಸೀತಾರಾಮ ಕದಿಕಡ್ಕ, ವಿಜಯಕೃಷ್ಣ ಕೆ.ಎಸ್., ಸೂರ್ಯನಾರಾಯಣ ಭಟ್, ಮಹಾಬಲೇಶ್ವರ ಭಟ್, ಕೃಷ್ಣ ಶರ್ಮಾ, ಉದಯ ಆಚಾರ್ಯ, ಧರ್ಮಪಾಲ ಪೀಚೆ, ಜನಾರ್ದನ ನಾಯ್ಕ ನಿಡ್ಯಮಲೆ, ದಾಸಪ್ಪ ಮಡಿವಾಳ, ಹರಿಪ್ರಸಾದ್ ಪೆರಂಗಾಜೆ ಅವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಹಳೆಯ ಸಮಿತಿಯ ಸದಸ್ಯರನ್ನು ಮುಂದುವರೆಸಲಾಯಿತು.