ಬಡ್ಡಡ್ಕ ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕ ಮಹಾಸಭೆ- ನೂತನ ಪದಾಧಿಕಾರಿಗಳು:

0

ಅಧ್ಯಕ್ಷ- ದಿನೇಶ್ ಬಡ್ಡಡ್ಕ , ಕಾರ್ಯದರ್ಶಿ- ದಯಾನಂದ ಪತ್ತುಕುಂಜ , ಖಜಾಂಜಿ- ನಂದಕುಮಾರ್ ಬಾಟೋಳಿ

ಆಲೆಟ್ಟಿ ಗ್ರಾಮದ ಬಡ್ಡಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕ ಮಹಾಸಭೆಯು ಮಂದಿರದ ಅಧ್ಯಕ್ಷ ಹರೀಶ್ ರಂಗತ್ತಮಲೆ ಯವರ ಅಧ್ಯಕ್ಷತೆಯಲ್ಲಿ ನ. 12 ರಂದು ಮಂದಿರದ ವಠಾರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಪದಾಧಿಕಾರಿಗಳು ಮಂಡಿಸಿದರು. ಮುಂದಿನ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು.


ಗೌರವಾಧ್ಯಕ್ಷ
ಡಾ. ಜೈದೀಪ್ ಎನ್.ಎ, ಅಧ್ಯಕ್ಷ ದಿನೇಶ್ ಬಡ್ಡಡ್ಕ, ಕಾರ್ಯದರ್ಶಿ ದಯಾನಂದ ಪತ್ತುಕುಂಜ, ಕೋಶಾಧಿಕಾರಿ ನಂದಕುಮಾರ್ ಬಾಟೋಳಿ, ಜತೆ ಕಾರ್ಯದರ್ಶಿ ಜಯಪ್ರಕಾಶ್ ಪೆರುಮುಂಡ, ಉಪಾಧ್ಯಕ್ಷ ಹೇಮನಾಥ ಗುಂಡ್ಯ ಬಡ್ಡಡ್ಕ, ಸದಸ್ಯರಾಗಿ
ಸತ್ಯಕುಮಾರ್ ಆಡಿಂಜ, ಪುಂಡರೀಕ ಕಾಪುಮಲೆ, ದಿನೇಶ್ ನಾಯರ್ ಕಲ್ಲಪಳ್ಳಿ, ಗಂಗಾಧರ ಪತ್ತುಕುಂಜ, ನಿತ್ಯಾನಂದ ಗುಂಡ್ಯ, ಲೋಹಿತ್ ಕುಮಾರ್ ರಂಗತ್ತಮಲೆ, ಸುನಿಲ್ ಗುಂಡ್ಯ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಚಂದ್ರ ಪಿ.ಕೆ, ಕಾರ್ಯದರ್ಶಿ ಕಮಲಾಕ್ಷ ಕೆ, ಕೋಶಾಧಿಕಾರಿ ಗಿರಿಯಪ್ಪ ನಾಯ್ಕ್ ಎಲಿಕ್ಕಳ, ನಿರ್ದೇಶಕರಾದ ವೆಂಕಟ್ ರಾಜ್ ಬಿ .ಆರ್, ಗಂಗಾಧರ ಬಡ್ಡಡ್ಕ, ವೆಂಕಟ್ರಮಣ ದೋಣಿಮೂಲೆ, ಸುದೀಪ್ ಆಡಿಂಜ, ಶಶಿಧರ ತಿಮ್ಮನ ಮೂಲೆ, ಜನಾರ್ಧನ ಗುಂಡ್ಯ ಗುರುಸ್ವಾಮಿ ಕಲ್ಲಪ್ಪಳ್ಳಿ, ಜನಾರ್ದನ ಆರ್.ಎಲ್, ಸುನಿಲ್ ಪಾವಲಿಕಜೆ, ಪಿ .ಆರ್ ವಿಶ್ವನಾಥ,ಎಸ್.ಎನ್ ಜಯರಾಮ ಪಿಂಡಿಬನ, ಸತೀಶ್ ಗೂಡಿಂಜ, ಯತೀಶ್ ಬಿ. ಎಸ್, ನವೀನ್ ಕುಮಾರ್ ಗೂಡಿಂಜ, ರಾಘವೇಂದ್ರ ಮೂಲೆಬಡ್ಡಡ್ಕ, ಅಭಿಜಿತ್ ಡಿ.ಆರ್, ಜಯಕುಮಾರ್ ಡಿ.ಜೆ ಉಪಸ್ಥಿತರಿದ್ದರು. ಸನತ್ ಪ್ರಾರ್ಥಿಸಿದರು ಗಿರಿಯಪ್ಪ ನಾಯ್ಕ್ ಎಲಿಕ್ಕಳ ಕಾರ್ಯಕ್ರಮ ನಿರೂಪಿಸಿದರು.