ದೇವಚಳ್ಳ : ರಾಷ್ಟೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಪಂಚಾಧ್ವನಿ ಕಾರ್ಯಕ್ರಮ

0

ಗ್ರಾಮ ಪಂಚಾಯತಿ ದೇವಚಳ್ಳ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮತ್ತು ದೇವಚಳ್ಳ ಮಂಗಳ ಕಲಾ ಸಾಹಿತ್ಯ ವೇದಿಕೆ ಪಟ್ಟೆ, ಬಡಗನ್ನೂರು ಘಟಕ, ಪುತ್ತೂರು ಯಶಸ್ವಿ ನಾಗರಿಕ ಸೇವಾ ಸಂಘ ವಾಸುದೇವ ನಗರ, ಕಾರ್ಕಳ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ರಾಷ್ಟೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಪಂಚಧ್ವನಿ ಕಾರ್ಯಕ್ರಮ 2023 ಇಂದು ದೇವಚಳ್ಳ ಗ್ರಾಮ ಪಂಚಾಯತ್ ಸಭಾಭಾವನದಲ್ಲಿ ಉದ್ಘಾಟನೆಗೊಂಡಿತು.

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಸದಸ್ಯತ್ವ ಆಂದೋಲನ ಕಾರ್ಯಕ್ರಮ, ಮಕ್ಕಳ ಸ್ನೇಹಿ ಗ್ರಂಥಾಲಯ – ಓದುಗರ ಸಮಾವೇಶ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪಡುಮಲೆ ಯಶಸ್ವಿ ಸಾಧನ ಶ್ರೀ ಪ್ರಶಸ್ತಿ – 2023 ಪ್ರದಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ವಹಿಸಿದ್ದರು.

ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ. ಇ., ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಗ್ರಾ. ಪಂ. ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ಸೇವಾಜೆ, ಜಿ. ಪಂ. ಮಾಜಿ ಸದಸ್ಯೆ ಯಶೋಧ ಬಾಳೆಗುಡ್ಡೆ, ಕರ್ನಾಟಕ ರಾಜ್ಯ ಗ್ರಂಥಾಲಯ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಸಾವಿತ್ರಿ ಕಣೆಮರಡ್ಕ, ತಾಲೂಕು ಅಧ್ಯಕ್ಷೆ ಅಭಿಲಾಷ, ಸಂಜೀವಿನಿ ಒಕ್ಕೂಟದ ತಾಲೂಕು ಮೇಲ್ವಿಚಾರಕಿ ಶ್ರೀಮತಿ ಶ್ವೇತಾ, ಉಪಸ್ಥಿತರಿದ್ದರು. ಗ್ರಾ. ಪಂ. ಸದಸ್ಯ ರಮೇಶ್ ಪಡ್ಪು ಸ್ವಾಗತಿಸಿದರು.


ಪಿ. ಡಿ. ಒ. ಗುರುಪ್ರಸಾದ್ ವಂದಿಸಿದರು. ಕಾರ್ಯಕ್ರಮ ಸಂಘಟಕ ಮುರಳೀಧರ ಸಿ. ಹೆಚ್. ಕಾರ್ಯಕ್ರಮ ನಿರೂಪಿಸಿದರು.


ಇದೇ ಸಂದರ್ಭದಲ್ಲಿ ಗ್ರಾಮದಶಿಕ್ಷಣ ಕ್ಷೇತ್ರ – ತಿರುಮಲೇಶ್ವರಿ ಯು. ಎಸ್., ಕೃಷಿ ಕ್ಷೇತ್ರ – ವಸಂತ ಕುಮಾರ್ ಬೊಳ್ಳಜೆ, ಅಂಗನವಾಡಿ ಕಾರ್ಯಕರ್ತೆ – ರತ್ನಾವತಿ ಬಿ., ಯಕ್ಷಗಾನ ಕ್ಷೇತ್ರ – ರಾಮಚಂದ್ರ, ಆಶಾ ಕಾರ್ಯಕರ್ತೆ – ಪ್ರಮೀಳಾ, ಮಾಧ್ಯಮ ಕ್ಷೇತ್ರ – ಮುರಳೀಧರ ಅಡ್ಡನಪಾರೆ, ನಾಟಿ ವೈದ್ಯೆ – ಸೀತಾರತ್ನ, ಅರೋಗ್ಯ ಕ್ಷೇತ್ರ – ಕುಸುಮಾವತಿ ಬಿ. ಹೆಚ್., ಸೇವಾ ಸೌರಭ ರತ್ನ – ಚಿರಾಯು ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್, ಗ್ರಂಥಾಲಯ ಕ್ಷೇತ್ರ – ಲೀಲಾವತಿ, ಸಮಾಜ ಸೇವೆ – ಮುಖೇಶ್ ಪಡ್ಪು ರವರನ್ನು ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು
.