ದಕ್ಷಿಣ ಕನ್ನಡ -ಉಡುಪಿ ಜಿಲ್ಲೆಯ ವಕೀಲರ ಸಾಂಸ್ಕೃತಿಕ ಕಲರವ

0

ಪ್ರಹಸನ ಸ್ಪರ್ಧೆಯಲ್ಲಿ ಸುಳ್ಯ ವಕೀಲರ ಸಂಘ ದ್ವಿತೀಯ

ನ.11ರಂದು ಕುಂದಾಪುರ ವಕೀಲರ ಸಂಘದ ವತಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಕೀಲರ ಸಾಂಸ್ಕೃತಿಕ ಕಲರವ ನಡೆಯಿತು. ಸುಳ್ಯ ವಕೀಲರ ಸಂಘವು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಹಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಕೊಂಡಿದೆ.

ಕಲಾವಿದರುಗಳಾಗಿ ಸುಳ್ಯ ವಕೀಲರ ಸಂಘದ ಸದಸ್ಯರುಗಳಾದ ಹಿರಿಯ ನ್ಯಾಯವಾದಿ ಡಿ.ಸುಬ್ರಾಯ ಭಟ್, ವಕೀಲರ ಸಂಘದ ಕೋಶಾಧಿಕಾರಿ ಜಗದೀಶ್ ಡಿ ಪಿ, ಗ್ರಂಥಾಲಯ ಕಾರ್ಯದರ್ಶಿ ಹರ್ಷಿತ್ ಕೆ, ಸಂದೀಪ್ ವಳಲಂಬೆ, ಚಂದ್ರಶೇಖರ ಯು, ರೋಹಿಣಿ ಜಿ ವೈ, ಪಲ್ಲವಿ ಎಂ ಎಂ, ಲಿಖಿತ ಕೆ ವಿ, ಹಿನ್ನೆಲೆಯಲ್ಲಿ ಸಹಕಾರ ಪುಷ್ಪರಾಜ್ ಗಾಂಬೀರ್, ಶ್ರೀಮತಿ ಸುಮಾ ಬಾಳಿಲ, ಉದಯ ಕೊಯಿಲ, ನಿರೂಪಣೆ ಯಲ್ಲಿ ಧನ್ಯ ಕಲ್ಮಕಾರು ವಿದ್ಯಾರ್ಥಿನಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಇವರು, ಲೋಕೇಶ್ ಊರುಬೈಲು, ರಂಗ ಮಯೂರಿ ಕಲಾ ಶಾಲೆ ಸುಳ್ಯ ಇವರು ತರಬೇತಿ ನೀಡಿದರು. ಮೇಕಪ್ ನಲ್ಲಿ ರಮೇಶ್ ಉಡುಪಿ, ಸಂಗೀತದಲ್ಲಿ ರೋಹಿತ್ ಮಲ್ಪೆ ಇವರು ಸಹಕರಿಸಿದರು.