ಮಾರಿಮುತ್ತು ಸೋಣಂಗೇರಿ ನಿಧನ

0

ಜಾಲ್ಸೂರು ಗ್ರಾಮದ ಸೋಣಂಗೇರಿ ಕ್ವಾಟ್ರಸ್ ಮಾರಿಮುತ್ತು ರವರು ಅಲ್ಪಕಾಲದ ಅಸೌಖ್ಯದಿಂದ ನ.22 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 98 ವರ್ಷ ವಯಸ್ಸಾಗಿತ್ತು.

ಮಾರಿಮುತ್ತು ರವರು ಭಾರತೀಯ ಮಜ್ದೂರ್ ಸಂಘದ ಹಿರಿಯ ಮುಂದಾಳು, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ರಬ್ಬರ್ ಕಾರ್ಮಿಕ ಸಂಘಟನೆಯ ರೂವಾರಿ, ಕನ್ನಡ ಭಾಷೆಯ ಅರಿವಿಲ್ಲದ ಸಮಯದಲ್ಲಿ ರಬ್ಬರ್ ನಿಗಮದಲ್ಲಿ ಹಲವು ಕುಟುಂಬಗಳಿಗೆ ಕೆಲಸ ದೊರಕಿಸಿಕೊಡುವಲ್ಲಿ ಸಫಲತೆಯನ್ನು ಕಂಡವರು.

ಮೃತರು ಪುತ್ರರಾದ ನಾರಾಯಣ ಸ್ವಾಮಿ ಜಿ.ಎಂ., ನಾಗಲಿಂಗಮ್ ಜಿ ಎಂ., ಬಾಲಸುಬ್ರಹ್ಮಣ್ಯಂ ಜಿ.ಎಂ, ಸೆಲ್ವರತ್ನ ಜಿ.ಎಂ, ಅಣ್ಣ ದೊರೈ ಜಿ.ಎಂ. ಹಾಗೂ ಪುತ್ರಿಯರಾದ ಶಾರದ ಜಿ.ಎಂ, ತಿಲಕ ಜಿ.ಎಂ., ದೇಸಮ್ಮ ಜಿ.ಎಂ., ಜಯಲಕ್ಷ್ಮಿ ಜಿ.ಎಂ. ಮತ್ತು ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.