ಜಾಲ್ಸೂರಿನಲ್ಲಿ ಸ್ಮೈಲ್ ವಿಜ಼್ ದಂತ ಚಿಕಿತ್ಸಾಲಯ ಶುಭಾರಂಭ

0

ಜಾಲ್ಸೂರಿನ ಎನ್.ಇ. ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಡಾ. ಸಂದೀಪ್ ಬಿರ್ಮುಕಜೆ ಅವರ ಮಾಲಕತ್ವದ ಸ್ಮೈಲ್ ವಿಜ಼್ ದಂತ ಚಿಕಿತ್ಸಾಲಯವು ನ.24ರಂದು ಶುಭಾರಂಭಗೊಂಡಿತು.

ಬೆಳಿಗ್ಗೆ ಬ್ರಹ್ಮಶ್ರೀ ವೇ. ಮೂ. ಪುರೋಹಿತ ನಾಗರಾಜ್ ಭಟ್ ಅವರ ಪೌರೋಹಿತ್ಯದಲ್ಲಿ ಗಣಪತಿ ಹವನ, ಧನ್ವಂತರಿ ಪೂಜೆ ನಡೆಯಿತು.

ಬಳಿಕ ನೂತನ ದಂತ ಚಿಕಿತ್ಸಾಲಯವನ್ನು ಸುಳ್ಯದ ಎಂ.ಬಿ. ಫೌಂಡೇಶನ್ ಸಂಸ್ಥಾಪಕರಾದ ಎಂ.ಬಿ. ಸದಾಶಿವ ಹಾಗೂ ಜಾಲ್ಸೂರಿನ ಹಿರಿಯ ವೈದ್ಯರಾದ ಡಾ. ಎಂ. ಕೃಷ್ಣ ಭಟ್ ಅವರು ದೀಪಬೆಳಗಿಸಿ, ಉದ್ಘಾಟಿಸಿ, ಶುಭಹಾರೈಸಿದರು‌.


ಈ ಸಂದರ್ಭದಲ್ಲಿ ಡಾ. ಸಂದೀಪ್ ಅವರ ತಂದೆ ಸುಧಾಕರ ಬಿರ್ಮುಕಜೆ, ತಾಯಿ ಶ್ರೀಮತಿ ಉದಯಗೌರಿ, ಕನಕಮಜಲು ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ, ಕಟ್ಟಡದ ಮಾಲಕರಾದ ಎನ್.ಐ. ಇಕ್ಬಾಲ್, ಎನ್‌.ಐ. ಮಹಮ್ಮದ್ ಕುಂಞಿ, ಡಿ.ಸಿ.ಸಿ. ಬ್ಯಾಂಕ್ ವ್ಯವಸ್ಥಾಪಕ ಚಂದ್ರಶೇಖರ ಶೆಟ್ಟಿ, ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಎಂ.ಎಸ್. ಭಟ್ ಬೆನಕ ಸೇರಿದಂತೆ ಡಾ. ಸಂದೀಪ್ ಬಿರ್ಮುಕಜೆ ಅವರ ಕುಟುಂಬಸ್ಥರು ಹಾಗೂ ಜಾಲ್ಸೂರಿನ ವರ್ತಕರುಗಳು ಉಪಸ್ಥಿತರಿದ್ದರು.