ನಿಶ್ಚಲ್ ಕರೆಂಬಿಗೆ ಮೇಧಾನಮನಮ್ ಗೌರವ

0


ಮೈತ್ರಿ ಸಂಸ್ಕೃತ ಸಂಸ್ಕೃತಿ ಪ್ರತಿಷ್ಠಾನವು ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ ಮೇಧಾನಮನಮ್ ಯೋಧ ನಮನಂ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಸಂಸ್ಕೃತ ಭಾಷಾ ವಿಷಯದಲ್ಲಿ 100 ಕ್ಕೆ 100 ಅಂಕ ಗಳಿಸಿದ ನಿಶ್ಚಲ್ ಕೆ.ಜಿ. ಅವರನ್ನು ಮೇಧಾನಮನಮ್ ಗೌರವ ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ.ಗುರುರಾಜ್ ಕರಜಗಿ, ನಟ ಡಾ.ಸುಚೇಂದ್ರಪ್ರಸಾದ್, ನ್ಯಾಯಮೂರ್ತಿ ವಿ.ಶ್ರೀಶಾನಂದ, ಹಾಸ್ಯ ಬರಹಗಾರ ಎಂ.ಎನ್, ನರಸಿಂಹಮೂರ್ತಿ ಮತ್ತಿತರರಿದ್ದರು.

ನಿಶ್ಚಲ್‌ರವರು ಪೆರಾಜೆ ಕರೆಂಬಿ ಮನೆಯ ಇಂಜಿನಿಯರ್ ಜನಾರ್ದನ ಗೌಡ ಹಾಗೂ ಜ್ಯೋತಿ ದಂಪತಿಯ ಪುತ್ರ. ಪ್ರಸ್ತುತ ಪುತ್ತೂರಿನಲ್ಲಿ ನೆಲೆಸಿದ್ದಾರೆ.