ಗಾಂಧಿನಗರ : ಇಸ್ಪೀಟು ಆಡುತ್ತಿದ್ದ ವೇಳೆ ಪೊಲೀಸರಿಂದ ದಾಳಿ

0

ಎಂಟು ಮಂದಿಯ ಬಂಧನ, ಪ್ರಕರಣ ದಾಖಲು

ಸುಳ್ಯ ಗಾಂಧಿನಗರ ಪರಿಸರದಲ್ಲಿ ಹಣ ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ ಘಟನೆ ಡಿ. 3 ರಂದು ಸಂಜೆ ನಡೆದಿದೆ.

ಗಾಂಧಿನಗರದ ಕೆರೆಮೂಲೆಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಸುಳ್ಯ ಪೊಲೀಸ್ ಠಾಣಾ ಉಪ ನಿರೀಕ್ಷಕ ಈರಯ್ಯ ದೂಂತೂರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ ಉತ್ತರ ಕರ್ನಾಟಕ ಭಾಗದ 8 ಜನರು ಗುಂಪು ಸೇರಿಕೊಂಡು ಇಸ್ಪೀಟ್‌ ಎಲೆಗಳನ್ನು ಎರಡು ಕಡೆ ಹಾಕುತ್ತಿದ್ದು, ಆ ಸಮಯ ಉಳಿದವರು ಹಣವನ್ನು ಪಣವನ್ನಾಗಿಟ್ಟು ಜೂಜಾಟ ಆಡುತ್ತಿರುವುದು ಕಂಡು ಬಂದಿದೆ.

ದಾಳಿ ವೇಳೆ ಒಟ್ಟು 8,470 ರೂಪಾಯಿ ಹಣ ಹಾಗೂ ಇಸ್ಪೀಟ್‌ ಎಲೆಗಳನ್ನು ಮಹಜರು ಮುಖೇನ ವಶಕ್ಕೆ ಪಡೆದುಕೊಳ್ಳಲಾಗಿದ್ದು ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.