ಆನೆಗುಂಡಿ ಬಳಿ ಕಾರು – ಲಾರಿ ಅಪಘಾತ – ಜಖಂ

0

ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ, ಕಾರಿನ ಮುಂಭಾಗ ಜಖಂಗೊಂಡ ಘಟನೆ ಡಿ.5ರಂದು ಕನಕಮಜಲು ಗ್ರಾಮದ ಆನೆಗುಂಡಿಯಲ್ಲಿ ಸಂಭವಿಸಿದೆ.

ಪುತ್ತೂರಿನ ಈಶ್ವರ ಮಂಗಲದ ನೆಟ್ಟಣಿಗೆ ಮುಡ್ನೂರು ನಿವಾಸಿಯಾಗಿರುವ ಸುಳ್ಯದ ಬಶೀರ್ ಎಂಬವರು ತನ್ನ ಸಂಬಂದಿ ಸೈಯ್ಯದ್ ಜಾಬೀರ್ ಎಂಬವರ ಕಾರಿನಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ಈಶ್ವರಮಂಗಲ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಆನೆಗುಂಡಿಯ ಇಳಿಜಾರು ಪ್ರದೇಶದಲ್ಲಿ ಮುಂಭಾಗದಿಂದ ಬಂದ ಲಾರಿ ಕಾರಿಗೆ ಢಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.