ಸುಬ್ರಹ್ಮಣ್ಯ:ಹಸಿವಿನಿಂದ ಕಂಗಾಲಾದ ಮಕ್ಕಳಿಗೆ ಆಸರೆಯಾದ ಡಾlರವಿ ಕಕ್ಕೆಪದವು ಟ್ರಸ್ಟ್

0

ಸುಬ್ರಹ್ಮಣ್ಯಕ್ಕೆ ಹಾವೇರಿ ಮೂಲದ ಹಳ್ಳಿಯೊಂದರಿಂದ ಬಂದ ಶಾಲಾ ಮಕ್ಕಳ ಪ್ರವಾಸ ತಂಡದ ಮಕ್ಕಳಿಗೆ ಡಾlರವಿ ಕಕ್ಕೆಪದವು ಟ್ರಸ್ಟ್ ಊಟದ ವ್ಯವಸ್ಥೆ ಮಾಡಿದ ಘಟನೆ ಡಿ.19 ರಂದು ವರದಿಯಾಗಿದೆ.

ಸುಬ್ರಹ್ಮಣ್ಯ ಬಂದಾಗ ತಡವಾದ ಕಾರಣ ಭೋಜನ ವ್ಯವಸ್ಥೆ ಹಾಗೂ ಹೋಟೆಲ್ ಗಳ ಮುಚ್ಚಲಾಗಿತ್ತು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಭೇಟಿ ನೀಡಿದ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷ ಡಾl ರವಿ ಕಕ್ಕೆಪದವು ಹಸಿವಿನಿಂದ ಕಂಗಾಲಾದ ಮಕ್ಕಳನ್ನು ನೋಡಿ ಅವರ ಜೊತೆ ಮಾತಾಡಿ ಅವರನ್ನು ಊಟಕ್ಕೆ ತನ್ನ ಮನೆಗೆ ಕರೆದುಕೊಂಡು ಹೋಗಿ ಸುಮಾರು 65 ಮಕ್ಕಳು ಮತ್ತು ಶಿಕ್ಷಕರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ರವಿ ಕಕ್ಕೆಪದವು ಅವರ ಪತ್ನಿ ಗೀತಾರವರು ಊಟದ ವ್ಯವಸ್ಥೆ ಮಾಡಿದರು. ಹಾಗೂ ರವಿ ಕಕ್ಕೆಪದವು ಅವರ ಮನೆಯಲ್ಲಿಯೇ ಮಲಗಲು ವ್ಯವಸ್ಥೆಯನ್ನು ಮಾಡಿದರು. ಶಾಲಾ ಬಸ್ ಕೆಟ್ಟು ಹೋದ ಕಾರಣ ಇವರೊಂದಿಗೆ ಟ್ರಸ್ಟ್ ನ ಕೋಶಾಧಿಕಾರಿಯಾದ ಮಣಿಕಂಠ, ಹಾಗೂ ಸದಸ್ಯರಾದ ವಸಂತ್ ಮತ್ತು ಕಾರ್ತಿಕ್ ಸಹಕರಿಸಿದರು .