ಬಳ್ಪ: ಸ್ಕೂಟರ್ ಮೇಲೆ ಕಡವೆ ಜಿಗಿದು ಸವಾರರಿಗೆ ಗಾಯ

0

ಸ್ಕೂಟರ್ ಮೇಲೆ ಕಡವೆ ಜಿಗಿದು ಸವಾರಿಬ್ಬರು ಗಾಯ ಗೊಂಡ ಘಟನೆ
ಡಿ.23 ರಂದು ರಾತ್ರಿ ಬಳ್ಪದಿಂದ ವರದಿಯಾಗಿದೆ.

ಐವತ್ತೊಕ್ಲು ಗ್ರಾಮದ ನೇರಳ ಸುದರ್ಶನ ಮತ್ತು ಅವರ ಪತ್ನಿ ಅಕ್ಷತಾ ರವರು
ಸುಬ್ರಹ್ಮಣ್ಯದಿಂದ ಪಂಜದ ಕಡೆ ಬರುತ್ತಿದ್ದಾಗ ಬಳ್ಪ ಸಮೀಪದ ಎಡೋಣಿ ಎಂಬಲ್ಲಿ ಸ್ಕೂಟರ್ ಮೇಲೆ ಕಡವೆ ಜಿಗಿದ್ದಿದ್ದು ಸವಾರಿಬ್ಬರು ಗಾಯ ಗೊಂಡಿದ್ದಾರೆ. ಅಕ್ಷತಾ ರವರ
ತಲೆಗೆ ಗಾಯವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಕೆ ಗೊಳ್ಳುತ್ತಿದ್ದಾರೆ.ಸುದರ್ಶನ್ ರವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆದಿದ್ದಾರೆ.

ಪಂಜ ಅರಣ್ಯ ಇಲಾಖೆಯ ಅಧಿಕಾರಿಗಳು
ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.