ಅಡ್ಕಾರು: ಅಂಗಡಿಯಿಂದ ಕಳವು

0

ಅಂಗಡಿಯೊಂದಕ್ಕೆ ರಾತ್ರಿಯ ವೇಳೆ ನುಗ್ಗಿದ ಕಳ್ಳರು ಅಂಗಡಿ ಒಳಗೆ ಮಾರಾಟಕ್ಕಿರಿಸಿದ್ದ ಸಾಮಾಗ್ರಿಗಳನ್ನು ಹಾಗೂ ನಗದು ಹಣ ಕಳವುಗೈದ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಡಿ.29ರಂದು ರಾತ್ರಿ ಸಂಭವಿಸಿದೆ.

ಅಡ್ಕಾರಿನಲ್ಲಿ ಕಳೆದ ಹಲವಾರು ವರ್ಷಗಳಿಂದ ದಿನಸಿ ವ್ಯಾಪಾರಸ್ಥರಾಗಿರುವ ಹೆಚ್.ಎ. ಅಬ್ದುಲ್ ಖಾದರ್ ಅವರ ಅಂಗಡಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಅಂಗಡಿಯೊಳಗಿದ್ದ, ಎರಡು ಪೈಬರ್ ಬುಟ್ಟಿ , ಎರಡು ಮರ ಕಡಿಯುವ ಕತ್ತಿ , ಹಾಗೂ ಮೂರು ಸಾವಿರ ನಗದು ಕಳವುಗೈದು ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.