ನಿಂತಿಕಲ್ಲು : ಸಾಧನ ಸಹಕಾರ ಸೌಧದಲ್ಲಿ ಅಡಿಗ ಮೋಟಾರ್ಸ್ ಶುಭಾರಂಭ

0

ನಿಂತಿಕಲ್ಲಿನ ಮುರುಳ್ಯ ಎಣ್ಮೂರು ಸೊಸೈಟಿನ ಸಾಧನ ಸಹಕಾರ ಸೌಧದಲ್ಲಿ ಅಡಿಗ ಮೋಟಾರ್ಸ್ ಜ.13ರಂದು ಶುಭಾರಂಭಗೊಂಡಿತು. ಮಂಗಳೂರು ಜನತಾ ಬಜಾರ್ ಮಾಜಿ ಅಧ್ಯಕ್ಷ ಹಾಗೂ ಮುರುಳ್ಯ ಎಣ್ಮೂರು ಸೊಸೈಟಿ ಮಾಜಿ ಅಧ್ಯಕ್ಷ ಪ್ರಸನ್ನ ಕೆ . ಎಣ್ಮೂರು ದೀಪ ಪ್ರಜ್ವಲನೆ ಮಾಡಿ ಶುಭ ಹಾರೈಸಿದರು .
ವೇದಿಕೆಯಲ್ಲಿ ಮುರುಳ್ಯ ಎಣ್ಮೂರು ಸೊಸೈಟಿ ಅಧ್ಯಕ್ಷೆ ಶ್ರೀಮತಿ ಕುಸುಮಾವತಿ ರೈ. ಕೆ.ಜಿ ಎಣ್ಮೂರು ಉಪಸ್ಥಿತರಿದ್ದರು.
ಸಂಸ್ಥೆಯ ಹಿರಿಯರಾದ ರಾಧಾಕೃಷ್ಣ ಅಡಿಗ ಅಡೂರು, ಸಂಸ್ಥೆಯ ಬಗ್ಗೆ ಪ್ರಾಸ್ತವನೆ ಮಾಡಿ ಸ್ವಾಗತಿಸಿದರು, ಮುರುಳ್ಯ ಎಣ್ಮೂರು ಸೊಸೈಟಿ ಮ್ಯಾನೇಜರ್ ಮರ್ಧಾಳ ಇರ್ಪಾನ್ ಪ್ರಥಮ ಗ್ರಾಹಕರಿಗೆ ಕೀ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ರಮೇಶ್ ಕೋಟೆ, ಶ್ರೀ ರಾಜ್ ಕೋಟೆ, ರಘುನಾಥ ರೈ ಅಲೆಂಗಾರ, ಮಾಲಕರ ತಾಯಿ ಶುಭ ಆರ್ .ಕೃಷ್ಣ ,ತಂದೆ ರಾಧಾಕೃಷ್ಣ ಅಡಿಗ, ಶ್ರೀಮತಿ ಪೂಜಾ ಶಿವರಾಜ್, ಎಲಿಮಲೆ ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಕುಮಾರ್ ದಂಪತಿಗಳು , ಕೇರ್ಪಡ ಮಹಿಷಾಮರ್ಧಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತನಡುಬೈಲು, ಕಾರ್ಯದರ್ಶಿ ವೆಂಕಪ್ಪ ಗೌಡ ಆಲಾಜೆ, ಅಲ್ಲದೆ ಎಚ್ . ವಸಂತ ಹುದೇರಿ, ಗ್ರಾಹಕರು, ವರ್ತಕರು ಉಪಸ್ಥಿತರಿದ್ದರು.