ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವದ ಆಮಂತ್ರಣ ಬಿಡುಗಡೆ

0

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವವು ಫೆ.08 ರಿಂದ ಫೆ.10 ರವರೆಗೆ ವಿವಿಧ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಆಮಂತ್ರಣ ಪತ್ರ ಬಿಡುಗಡೆಯು ಜ.14 ರಂದು ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಪದ್ಮನಾಭ ಭಟ್ ಪೂಜಾ ಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಶ್ಯಾಮ್ ಪ್ರಸಾದ್, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್ . ಮನ್ಮಥ ,ವ್ಯ.ಸ.ಮಾಜಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ,ವೈದಿಕ ಮುಖ್ಯಸ್ಥ ರಾಜಾರಾಮ ರಾವ್ ಉದ್ದಂಪಾಡಿ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ರಾಮಚಂದ್ರ ಪಲ್ಲತ್ತಡ್ಕ, ವೆಂಕಪ್ಪ ಗೌಡ ಜೆ.ಟಿ,ಮಹೇಶ ಜಬಳೆ,ರವಿನಾಥ ಮಡ್ತಿಲ, ಶ್ರೀಮತಿ ತಾರಾ ರಾವ್ ಉದ್ದಂಪಾಡಿ,ಸಾತ್ವಿಕ್ ಕುದುಂಗು, ಶಿವರಾಮ ಮಡ್ತಿಲ,ಅನಿಲ್ ದೇರಾಜೆ,ಹರಿಶ್ಚಂದ್ರ ಕೊಪ್ಪತ್ತಡ್ಕ,ಭಾಸ್ಕರ ಕೋಡ್ತೀಲು,ಕೃಷ್ಣ ಬೆಳ್ಚಪ್ಪಾಡ,ನಾರಾಯಣ,ವಾಸುದೇವ ಬಾಂಜಿಕೋಡಿ,ಮಹಾಬಲ ಜಬಳೆ,ಮನೋಹರ ನಿಡುಬೆ,ಕೀರ್ತನ್ ಬೋಳುಗುಡ್ಡೆ, ದೇವಸ್ಥಾನದ ಕಚೇರಿ ಕಾರ್ಯನಿರ್ವಾಹಕ ಯಶವಂತ ಬಾರೆತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.