ಬೊಮ್ಮಾರು : ನೇಣು ಬಿಗಿದು ಆತ್ಮಹತ್ಯೆ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಮ್ಮಾರು ದಿ| ಕೃಷ್ಣಪ್ಪ ನಾಯ್ಕ ಎಂಬವರ ಪುತ್ರ ವಾಸುದೇವ ನಾಯ್ಕ‌ ಎಂಬವರು ನಿನ್ನೆ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ‌ ವರದಿಯಾಗಿದೆ.

ವಾಸುದೇವ(47 ವರ್ಷ)ರವರಿಗೆ ಕಳೆದ ಕೆಲ ಸಮಯಗಳಿಂದ ಕ್ಯಾನ್ಸರ್ ಖಾಯಿಲೆ ಬಾಧಿಸಿತ್ತು. ಹೀಗಾಗಿ‌ ಇವರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆದು ಮರಳಿದ್ದರು.

ನಿನ್ನೆ ರಾತ್ರಿ 7 ಗಂಟೆಯ ಸುಮಾರಿಗೆ ಪತ್ನಿ ಸ್ನಾನಕ್ಕೆ ಹೋಗಿದ್ದ ವೇಳೆ ವಾಸುದೇವರು ತಮ್ಮ ತೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಾಸುದೇವರವರು ಮನೆಯಲ್ಲಿ‌ ಇಲ್ಲದಿರುವುದನ್ನು ಗಮನಿಸಿ ಹುಡುಕಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಬಳಿಕ ಪೋಲೀಸರಿಗೆ‌ ಮಾಹಿತಿ ನೀಡಿ, ಮರಣೋತ್ತರ ಪರೀಕ್ಷೆಗಾಗಿ‌ ಮೃತದೇಹವನ್ನು‌ ಸುಳ್ಯ ಸರಕಾರಿ‌ ಆಸ್ಪತ್ರೆಗೆ ತರಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.‌

ಮೃತರು ಪತ್ನಿ ಪ್ರೇಮ, ಸಹೋದರರಾದ ಚನಿಯಪ್ಪ, ರಾಘವ, ಸಹೋದರಿಯರಾದ ಸುಬ್ಬಮ್ಮ, ಜಾನಕಿ‌ ಹಾಗೂ‌ ಕುಟುಂಬಸ್ಥರನ್ನು ಅಗಲಿದ್ದಾರೆ.