ಸುಬ್ರಹ್ಮಣ್ಯ : ಬಾಲೆಗೆ ಬಿದ್ದು ಸಿಕ್ಕ ಐವತ್ತು ಸಾವಿರ ಮರಳಿ ಕಳಕೊಂಡವರ ಕೈಗೆ

0

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ್ದ ಬೆಂಗಳೂರಿನ‌ ಭಕ್ತರೊಬ್ಬರ ಬಿದ್ದು ಹೋಗಿದ್ದ 50 ಸಾವಿರ ಹಣ ಬಾಲೆಯ ಪ್ರಮಾಣಿಕತೆಯಿಂದ ಮರಳಿ ಕಳಕೊಂಡವರ ಕೈ ಸೇರಿದ ಘಟನೆ ಸುಬ್ರಹ್ಮಣ್ಯದಿಂದ ಜ.16 ರಂದು ವರದಿಯಾಗಿದೆ.

ಶ್ರೀಧರ್ ಬೆಂಗಳೂರು ಎಂಬವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪೂಜೆಗೆ ಬಂದಿದ್ದು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಹೋಗುವಾಗ 50,000.ರೂಪಾಯಿ ಹಣ ಕಳಕೊಂಡಿದ್ದಾರೆ.


ಈ ಹಣ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಜಮಾ ಉಗ್ರಾಣ ಬಳಿ ಇರುವ ಹಣ್ಣು ಕಾಯಿ ಅಂಗಡಿ ಬಳಿಯಲ್ಲಿ ಪಂಜ ಚಿಮುಳ್ಳು ನಿವಾಸಿ ಚಂದ್ರಾವತಿ ಎಂಬ ಐದು ವರ್ಷ ಪ್ರಾಯದ ಹೆಣ್ಣು ಮಗುವಿಗೆ ಬಿದ್ದು ಸಿಕ್ಕಿದೆ.

ಅವಳು ಪೋಷಕರಿಗೆ ನೀಡಿದ್ದು ಅವರು ಅಲ್ಲೇ ಹತ್ತಿರದಲ್ಲೇ ಇದ್ದ ಹಣದ ವಾರಿಸುದಾರರಿಗೆ ಪ್ರಾಮಾಣಿಕವಾಗಿ ಹಣ ಹಿಂತಿರುಗಿಸಿದ್ದಾರೆ.


ಬಾಲಕಿಯರ ಪೋಷಕರು ಹಣ್ಣುಕಾಯಿ ಅಂಗಡಿ ಮಾಲೀಕ ಗುರು ಭಟ್ ಹಾಗೂ ಪ್ರದೀಪ್ ಅವರ ಸಮ್ಮುಖದಲ್ಲಿ ಹಣ ಕಳಕೊಂಡ ಶ್ರೀಧರ್ ಬೆಂಗಳೂರು ಎಂಬವರಿಗೆ ಹಣ ನೀಡಿದರು.