ಮರ್ಕಂಜದ ರೆಂಜಾಳ ಶ್ರೀ ಶಾಸ್ತಾವು ಯುವಕ ಮಂಡಲಕ್ಕೆ ಸ್ವಾಮಿ ವಿವೇಕಾನಂದ ಜಿಲ್ಲಾ ಸಾಂಘಿಕ ಯುವ ಪ್ರಶಸ್ತಿ

0

ಮರ್ಕಂಜ ರೆಂಜಾಳ ಶಾಸ್ತಾವು ಯುವಕ ಮಂಡಲಕ್ಕೆ ಸ್ವಾಮಿ ವಿವೇಕಾನಂದ ಜಿಲ್ಲಾ ಸಾಂಘಿಕ ಯುವ ಪ್ರಶಸ್ತಿ ಲಭಿಸಿದೆ.‌

ಸಮಾಜ ಸೇವೆ, ಕ್ರೀಡೆ, ಸಂಸ್ಕೃತಿಗಳಲ್ಲಿ ಮತ್ತಿತರ ಕ್ಷೇತ್ರದಲ್ಲಿ ಯುವಕ ಮಂಡಲ ಮಾಡಿದ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಯುವಜನ‌ ಒಕ್ಕೂಟ ಮಂಗಳೂರು ಇದರಿಂದ ಈ ಪ್ರಶಸ್ತಿ ಕೊಡಲಾಗಿದೆ‌. ಜ.20ರಂದು ಕಡಬದ ಸವಣೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ‌ ನಡೆದ ಕಾರ್ಯಕ್ರಮ ದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಿತು. ಯುವಕ ಮಂಡಲದ ಅಧ್ಯಕ್ಷ ಶಶಿಕಾಂತ ಗುಳಿಗಮೂಲೆ ಹಾಗೂ ಸದಸ್ಯರು ಈ ಪ್ರಶಸ್ತಿ ಸ್ವೀಕರಿಸಿದರು.