ಗಣರಾಜ್ಯೋತ್ಸವ ದಿನಾಚರಣೆ : ಮಂಡೆಕೋಲಿನಲ್ಲಿ ಹಿಂ.ಜಾ.ವೇದಿಕೆ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ

0

ಗಣರಾಜ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ತಾಲೂಕಿನ ಮಂಡೆಕೋಲು ಗ್ರಾಮದ ಹಿಂದೂ ಜಾಗರಣ ವೇದಿಕೆ ವತಿಯಿಂದ ಶುಕ್ರವಾರ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ಸ್ವಚ್ಛ ಪರಿಸರ ನಿರ್ಮಾಣಕ್ಕಾಗಿ ಗಣರಾಜ್ಯೋತ್ಸವದ ಶುಭ ಸಂದರ್ಭ ಆಯ್ಕೆ ಮಾಡಿದ ವೇದಿಕೆಯ ಸದಸ್ಯರ ಜೊತೆಗೆ ಸ್ತ್ರೀ ಶಕ್ತಿ ಸಂಘದ ಸದಸ್ಯೆಯರೂ ಜೊತೆಯಾದರು. ಸ್ವಚ್ಚತಾ ಕಾರ್ಯಕ್ರಮಕ್ಕೆ ತಾ.ಪಂ ಮಾಜಿ‌ ಅಧ್ಯಕ್ಷ ಶಂಕರ್ ಪೆರಾಜೆ ಚಾಲನೆ ನೀಡಿ ಶುಭ ಹಾರೈಸಿದರು.

ಸುಮಾರು ನಲ್ವತ್ತು ಜನರಿದ್ದ ತಂಡದ ವತಿಯಿಂದ ಮಂಡೆಕೋಲು ಮೇಲಿನ ಪೇಟೆಯಿಂದ ಕೆಳಗಿನ‌ ಪೇಟೆಯವರೆಗೆ ರಸ್ತೆಯ ತ್ಯಾಜ್ಯ ತೆರವಿನ ಜೊತೆಗೆ ಕೆಲವೆಡೆ ಚರಂಡಿಯ ಶುಚಿತ್ವವೂ ನಡೆಯಿತು.

ತಂಡದ ಶುಚಿತ್ವಾ ಕಾರ್ಯಕ್ಕೆ ಅಂಗಡಿ ಮಾಲಕರೂ ಕೈಜೋಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಊಟದ ವ್ಯವಸ್ಥೆಗೆ ಬಾಲಚಂದ್ರ ದೇವರಗುಂಡ, ಸಿಹಿ ತಿಂಡಿ ಯನ್ನು ಉದಯ್ ಆಚಾರ್, ಸ್ತ್ರೀ ಶಕ್ತಿ ಸಂಘ ಮಂಡೆಕೋಲು, ಪಂಚಾಯತ್ ಸದಸ್ಯರಾದ ಗೀತಾ ಶಿವಾಜಿನಗರ ಸಹಕಾರ ನೀಡಿದರು.