ಡಾ. ವೆಂಕಟರಮಣ ಭಟ್ ಕಾನಾವು ನಿಧನ

0

ಕೇರಳದ ಖ್ಯಾತ ಕಣ್ಣಿನ ತಜ್ಞ, ಪೆರುವಾಜೆ ಗ್ರಾಮದ ಕಾನಾವಿನ ಡಾ.ವೆಂಕಟರಮಣ ಭಟ್ ಕಾನಾವು ( 75) ಜ.28 ರಂದು ಮಧ್ಯಾಹ್ನ ನಿಧನ ಹೊಂದಿದರು.ಮೃತರು ಪತ್ನಿ ಸುಮತಿ ವಿ.ಭಟ್, ಪುತ್ರಿ ಧನ್ಯ, ಪುತ್ರ ಡಾ. ಅರವಿಂದ ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ.

ಮೃತರು ಕೇರಳದ ಕಣ್ಣೂರಿನಲ್ಲಿ ಕಳೆದ 45 ವರ್ಷಗಳಿಗಿಂತ ಅಧಿಕ ಕಾಲದಿಂದ ಕಣ್ಣಿನ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು. ಕಣ್ಣೂರು ಅಶೋಕ್ ಆಸ್ಪತ್ರೆಯನ್ನು ಮುನ್ನಡೆಸುತ್ತಿದ್ದ ಡಾ.ವೆಂಕಟರಮಣ ಭಟ್ ಜನಪ್ರಿಯ ವೈದ್ಯರಾಗಿ ಕೇರಳ ರಾಜ್ಯಾದ್ಯಂತ ಜನಮನ್ನಣೆ ಗಳಿಸಿದ್ದರು.

ಜ.29 : ಕಾನಾವಿನಲ್ಲಿ
ಅಂತಿಮ ದರ್ಶನ


ಮೃತರ ಪಾರ್ಥಿವ ಶರೀರದ ಅಂತಿಮ ವಿಧಿ ವಿಧಾನ ಕಾರ್ಯ ಜ.29 ರಂದು ಕಾನಾವು ಮೇಲಿನ ಮನೆಯಲ್ಲಿ ನಡೆಯಲಿದೆ. ಬೆಳಗ್ಗೆ 8 ರಿಂದ 8.30 ರ ತನಕ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.