ಪಂಜದ ನಿಕ್ಷಿತಾ ಕರಿಮಜಲು ಅಂತಾರಾಷ್ಟ್ರೀಯ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

0

ಬೆಂಗಳೂರು ನಗರ ಜಿಲ್ಲಾ ಸ್ಕಾಯ್ ಸಂಸ್ಥೆಯು ಆಯೋಜಿಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವೈಯುಕ್ತಿಕ ಮತ್ತು ಕವನ್ ಕಿ
ಸಮೂಹ ವಿಭಾಗದಲ್ಲಿ ಪಂಜದ ಕರಿಮಜಲು ನಿಕ್ಷಿತಾ ರವರು ಪ್ರಥಮ ಸ್ಥಾನವನ್ನು ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜ.4 ರಿಂದ ಜ.6ರವರೆಗೆ ಜೈಪುರದಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

ಫೆ. 3 ಮತ್ತು 4 ರಂದು ತ್ರಿಭವನ ವಿಶ್ವವಿದ್ಯಾನಿಲಯ ಕಠ್ಮಂಡು ನೇಪಾಳ ತ್ರಿಭವನ ವಿಶ್ವವಿದ್ಯಾಲಯದಲ್ಲಿ ನಡೆಯುವ ಅಂತರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.

ಇವರು ಪಂಜದ ಕರಿಮಜಲು ಶೇಷಪ್ಪ ಮತ್ತು ಲೀಲಾವತಿ ಯವರ ಪುತ್ರಿ. ಬೆಂಗಳೂರಿನ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಕನಕಪುರ ರೋಡ್ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರಿಗೆ ದಿವ್ಯಾ ಬಾಯಿಯವರು ತರಬೇತಿ ನೀಡಿದ್ದರು.