ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರೋತ್ಸವ ಮತ್ತು ದೈವಗಳ ನೇಮೋತ್ಸವ

0

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಮತ್ತು ದೈವಗಳ ನೇಮೋತ್ಸವ ಫೆ.೧ ಮತ್ತು ಫೆ.೨ ರಂದು ನಡೆಯಿತು.

ಜ.೨೫ ರಂದು ಗೊನೆ ಕಡಿಯುವ ಕಾರ್ಯಕ್ರಮ ನಡೆಸಲಾಗಿತ್ತು. ಜ.೩೧ ರಂದು ಹಸಿರುವಾಣಿ ಸಮರ್ಪಿಸಲಾಯಿತು.
ಫೆ. ೧ರ ಬೆಳಿಗ್ಗೆ ಗಣಪತಿ ಹೋಮ, ಏಕಾದಶ ರುದ್ರಾಭಿಷೇಕ, ಮಧ್ಯಾಹ್ನ ನವ ಕಲಶಾಭಿಷೇಕ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆದ ಬಳಿಕ ಚೆಂಡೆವಾದನ ನಡೆಯಿತು. ರಾತ್ರಿ ದೇವರ ಉತ್ಸವ ಬಲಿ ಹೊರಟು, ವಸಂತ ಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ಅನ್ನಸಂತರ್ಪಣೆ ನಡೆಯಿತು.

ಫೆ.೨. ಬೆಳಿಗ್ಗಿನ ಜಾವ ಉಳ್ಳಾಕ್ಲು -ಉಳ್ಳಾಲ್ತಿ ನೇಮ ನಡೆದು ಕುಮಾರ ದೈವದ ನೇಮ ನಡೆಯಿತು. ಶ್ರೀ ದೇವರಿಗೆ ಬೆಳಗ್ಗಿನ ಪೂಜೆ ಯ ಬಳಿಕ ರಕೇಶ್ವರಿ ದೈವದ ನೇಮ, ಧೂಮಾವತಿ ದೈವದ ನೇಮ ನಡೆಯಿತು. ಮಧ್ಯಾಹ್ನ ಮಹಾಪೂಜೆ, ದೈವಗಳ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆದು ಸಂಜೆ ಗುಳಿಗ ಕೋಲ ನಡೆಯಿತು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಿ.ಕೆ ಬೆಳ್ಯಪ್ಪ ಗೌಡ, ಪ್ರಧಾನ ಅರ್ಚಕ ಪರಮೇಶ್ವರ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಡಿ.ಎಂ ರಾಮಣ್ಣಗೌಡ, ಕರುಣಾಕರ ಪಾರೆಪ್ಪಾಡಿ, ಪದ್ಮನಾಭ ದಂಬೆಕೋಡಿ, ಶ್ರೀಮತಿ ಪುಷ್ಪಾವತಿ ಮೊಟ್ಟೆಮನೆ, ಲಿಂಗಪ್ಪ ನಾಯ್ಕ ಕಾಜಿಮಡ್ಕ, ಕುಶಾಲಪ್ಪ ಗೌಡ ಪಾರೆಪ್ಪಾಡಿ, ಶ್ರೀಮತಿ ಸುಧಾ ಜಯಪ್ರಕಾಶ್ ಆದಿಯಾಗಿ ಸೇವಾ ಸಮಿತಿ, ಊರ ಭಕ್ತರು ಕಾರ್ಯಕ್ರಮ ಯಶಸ್ವಿ ಗೆ ದುಡಿದರು.