ದೇಶ ವಿಭಜನೆ ಹೇಳಿಕೆ ಹಿನ್ನಲೆ – ಸಂಸದ ಡಿ.ಕೆ.ಸುರೇಶ್ ಮನೆಗೆ ಮುತ್ತಿಗೆ

0

ಬೆಂಗಳೂರು ಉತ್ತರ ಕ್ಷೇತ್ರದ ಬಿ ಜೆ ಪಿ ವಿಸ್ತಾರಕ ಸುಳ್ಯದ ಡಿ.ಕೆ ಅವಿನಾಶ್ ಬಂಧನ

ದೇಶ ವಿಭಜನೆ ವಿಚಾರವಾಗಿ ಹೇಳಿಕೆ ನೀಡಿದ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ರವರ ಮನೆಗೆ ಮುತ್ತಿಗೆ ಬಿಜೆಪಿ ಬೆಂಗಳೂರು ವತಿಯಿಂದ ನಡೆಯಿತು.ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಬಿ ಜೆ ಪಿ ವಿಸ್ತಾರಕ ಪ್ರಮುಖ್ ಡಿ.ಕೆ. ಅವಿನಾಶ್ ,ರಾಜ್ಯ ಮಾಧ್ಯಮ ಸಹ ಸಂಚಾಲಕ ಪ್ರಶಾಂತ್ ಕೇಡೆಂಜಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಬಂಧನಕ್ಕೆ ಒಳಗಾದರು.ಡಿ.ಕೆ ಅವಿನಾಶ್ ಸುಳ್ಯದವರಾಗಿದ್ದು ಈ ಹಿಂದೇ ಮಲ್ಲೇಶ್ವರಂ ಕ್ಷೇತ್ರ ವಿಸ್ತಾರಕರಾಗಿ ಪ್ರಸ್ತುತ ಬೆಂಗಳೂರು ಉತ್ತರ ಲೋಕ ಸಭಾ ಕ್ಷೇತ್ರ ಬಿ ಜೆ ಪಿ ವಿಸ್ತಾರಕ ರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.