ಬಾಗಿಲು ತೆರೆದ ಸುಳ್ಯ‌ ಬಿಜೆಪಿ ಕಚೇರಿ

0

ವೆಂಕಟ್ ವಳಲಂಬೆಯವರನ್ನು ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ರಾಗಿ ನೇಮಕಗೊಳಿಸಿದ ಬೆನ್ನಲ್ಲೆ ಸುಳ್ಯ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನದಿಂದಾಗಿ ನಾಯಕರು ಅಸಹಕಾರ ಚಳವಳಿ ನಡೆಸಿ, ಕಚೇರಿಗೆ ಬೀಗ ಜಡಿದಿದ್ದು, ಇಂದು ಬೆಳಗ್ಗೆ ಕಚೇರಿ ಬಾಗಿಲು ತೆರೆಯಲಾಗಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲರು ಇಂದು ಸುಳ್ಯಕ್ಕೆ ಬಂದು‌ ಕೋರ್ ಕಮಿಟಿಯವರೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ.