ಅರಂಬೂರು ಮೂಕಾಂಬಿಕಾ ದೇವಿಯ ಬೆಳ್ಳಿಯ ಫೋಟೋ ಪ್ರತಿಷ್ಠೆ- ಸಹಸ್ರ ತುಳಸಿ ಅರ್ಚನೆ

0

ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಶ್ರೀ ದೇವಿಯ ಬೆಳ್ಳಿಯ ಫೋಟೋ ಪ್ರತಿಷ್ಠೆಯು ವೇದಮೂರ್ತಿ ರವಿಶಂಕರ ಭಟ್ ತಂತ್ರಿಯವರ ನೇತೃತ್ವದಲ್ಲಿ ಇಂದು ಜರುಗಿತು.


ಶ್ರೀ ಮೂಕಾಂಬಿಕಾ ದೇವಿಗೆ ಕುಂಕುಮಾರ್ಚನೆ ಹಾಗೂ ವಿಷ್ಣು ಸಹಸ್ರನಾಮಾರ್ಚನೆ, ಸಹಸ್ರ ತುಳಸಿ ಅರ್ಚನೆಯು
ನಡೆದು ಮಧ್ಯಾಹ್ನ ಮಹಾಪೂಜೆಯಾಗಿ ‌ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಬಳಿಕ ಭಾಗವತ ಹೊಸಮನೆ ರಮೇಶ್ ಭಟ್ ನೇತೃತ್ವದಲ್ಲಿ ಪ್ರಸಿದ್ಧ ಕಲಾವಿದರಿಂದ ಶ್ರೀ ರಾಮ ದರ್ಶನ ಎಂಬ ಯಕ್ಷಗಾನ ತಾಳ ಮದ್ದಳೆಯು ಜರುಗಿತು.