ಸುಳ್ಯ ತಾಲೂಕು ವತಿಯಿಂದ ನಾಳೆ ಕನಕಮಜಲಿನಲ್ಲಿ ಸಂವಿಧಾನ ಜಾಗೃತಿ ಜಾಥಕ್ಕೆ ಚಾಲನೆ

0

ಸಂವಿಧಾನದ ಮೌಲ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ರಾಜ್ಯ ಸರ್ಕಾರದ ವತಿಯಿಂದ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥವು ನಾಳೆ ಫೆ.17ರಂದು ಬೆಳಿಗ್ಗೆ ಕನಕಮಜಲಿನ ಮೂಲಕ ಸುಳ್ಯ ತಾಲೂಕಿಗೆ ಪ್ರವೇಶಿಸಲಿದ್ದು, ಸುಳ್ಯ ತಾಲೂಕಿನ ವತಿಯಿಂದ ಚಾಲನೆಗೊಳ್ಳಲಿದೆ.

ಬೆಳಿಗ್ಗೆ 9 ಗಂಟೆಗೆ ಪುತ್ತೂರಿನಿಂದ ಕನಕಮಜಲಿಗೆ ಜಾಥವು ಬರಲಿದ್ದು, ಕಾಲ್ನಡಿಗೆಯ ಮೂಲಕ ಗ್ರಾಮ ಪಂಚಾಯತಿ ಆವರಣಕ್ಕೆ ಸಂವಿಧಾನ ಜಾಗೃತಿ ಜಾಥದ ರಥವು ಆಗಮಿಸಲಿದ್ದು, ಬಳಿಕ ಜಾಲ್ಸೂರು ಗ್ರಾ.ಪಂ. , ಸುಳ್ಯ ನಗರ ಪಂಚಾಯತಿ, ಅರಂತೋಡು, ಸಂಪಾಜೆ ಗ್ರಾಮ ಪಂಚಾಯತಿಗೆ ತೆರಳಿದೆ ಎಂದು ತಿಳಿದುಬಂದಿದೆ.