ಕಟ್ಟಕೋಡಿ ಕುಟುಂಬದಲ್ಲಿ ಶ್ರೀ ವಿಷ್ಣುಮೂರ್ತಿ, ಧರ್ಮದೈವ ಹಾಗೂ ಉಪದೈವಗಳ ಧರ್ಮನಡಾವಳಿ

0

ಕಾಸರಗೋಡು ಬಂದಡ್ಕದ ಕಟ್ಟಕೋಡಿ ಕುಟುಂಬದಲ್ಲಿ ಶ್ರೀ ‌ವಿಷ್ಣುಮೂರ್ತಿ ಶ್ರೀ ಧರ್ಮದೈವ ಹಾಗೂ ಉಪದೈವಗಳ ಧರ್ಮನಡಾವಳಿ ಫೆ.16 ಮತ್ತು17ರಂದು ಕಟ್ಟಕೋಡಿಯಲ್ಲಿ ನಡೆಯಿತು.

ಫೆ.16ರಂದು ಬೆಳಗ್ಗೆ ಉಗ್ರಾಣ ತುಂಬಿಸಲಾಯಿತು. ಬಳಿಕ ವೆಂಕಟ್ರಮಣ ದೇವರ ಹರಿಸೇವೆ, ಮಧ್ಯಾಹ್ನ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.


ರಾತ್ರಿ ದೈವಗಳ ಕೂಡುವಿಕೆ ನಡೆದು, ಪೊಟ್ಟ, ಪಂಜುರ್ಲಿ, ಕೊರತಿ ಹಾಗೂ ಉಪದೈವಗಳ ನೃತ್ಯ ಕೋಲ ನಡೆಯಿತು.

ಫೆ.17ರಂದು ಬೆಳಗ್ಗೆ ಶ್ರೀ ವಿಷ್ಣುಮೂರ್ತಿ ಮತ್ತು ಮೊಡಚಾಮುಂಡಿ ದೈವಗಳ ನಡಾವಳಿ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ನಂತರ ಅಂಗಾರ, ಗುಳಿಗ ದೈವಗಳ ನೇಮ ನಡೆಯಿತು.

ಕುಟುಂಬಸ್ಥರು, ಊರವರು ಸೇರಿ ಸಾವಿರಾರು ಮಂದಿ‌ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.