ಉಬರಡ್ಕ ಮಿತ್ತೂರು: ಬಳ್ಳಡ್ಕ ಶ್ರೀ ಕುಮಾರಸ್ವಾಮಿ ಶಿವಮಠದಲ್ಲಿ ದೇವರ ಪೂಜೆ – ದೈವಗಳ ನಡಾವಳಿ

0

ಉಬರಡ್ಕ ಮಿತ್ತೂರು ಗ್ರಾಮದ ಬಳ್ಳಡ್ಕ ಶ್ರೀ ಕುಮಾರಸ್ವಾಮಿ ಶಿವಮಠದಲ್ಲಿ ದೇವರ ಪೂಜೆ ಹಾಗೂ ದೈವಗಳ ನಡಾವಳಿಯು ಫೆ.16ರಿಂದ ಫೆ.18ರವರೆಗೆ ಜರುಗಿತು.

ಫೆ.16ರಂದು ರಾತ್ರಿ ಉಗ್ರಾಣ ತುಂಬಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಫೆ.17ರಂದು ಬೆಳಿಗ್ಗೆ ಗಣಪತಿ ಹೋಮ, ನಾಗದೇವರ ಪೂಜೆ, ಮಧ್ಯಾಹ್ನ ಶ್ರೀ ದೇವರ ಮಹಾಪೂಜೆ, ಅನ್ನಸಂತರ್ಪಣೆ ಜರುಗಿತು.

ಫೆ.17ರಂದು ರಾತ್ರಿ ದೈವಸ್ಥಾನದಲ್ಲಿ ದೈವಗಳ ಕೂಡುವಿಕೆ, ಬಳಿಕ ಉಪದೈವಗಳ ಕೋಲ ನಡೆಯಿತು.


ಫೆ.18ರಂದು ಬೆಳಿಗ್ಗೆ ರುದ್ರಚಾಮುಂಡಿ ಮತ್ತು ಧೂಮಾವತಿ ಧರ್ಮದೈವಗಳ ನಡಾವಳಿ ನಡೆದು ಮಾರಿಕಳ ಪ್ರವೇಶ, ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು. ರಾತ್ರಿ ಪಾಷಾಣಮೂರ್ತಿ ಮತ್ತು ಗುಳಿಗ ದೈವಗಳ ಕೋಲ ನಡೆಯಿತು.

ಈ ಸಂದರ್ಭದಲ್ಲಿ ಬಳ್ಳಡ್ಕ ಕುಟುಂಬಸ್ಥರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.