ಸುಳ್ಯದಲ್ಲಿ ಗಾಂಧಿ‌ ನಡಿಗೆಗೆ ಚಾಲನೆ

0

ಮಹಾತ್ಮ ಗಾಂಧೀಜಿಯವರು ಸುಳ್ಯ ಕ್ಕೆ ಬಂದು 90 ವರ್ಷವಾಗಿರುವ ಪ್ರಯುಕ್ತ ಸುಳ್ಯದ ಗಾಂಧಿ‌ ಚಿಂತನ ವೇದಿಕೆ ಹಾಗೂ ವಿವಿಧ ಸಂಘ ಆಶ್ರಯದಲ್ಲಿ ಗಾಂಧಿ ನಡಿಗೆ ಇಂದು ಸುಳ್ಯದಲ್ಲಿ ಆರಂಭಗೊಂಡಿತು.

ಸುಳ್ಯದ ಜ್ಯೋತಿ ಸರ್ಕಲ್ ಬಳಿಯಿಂದ ನಡಿಗೆ ಆರಂಭಗೊಂಡಿದ್ದು, ಸುಳ್ಯ ‌ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ರಾಷ್ಟ್ರಧ್ವಜವನ್ನು ಗಾಂಧಿ ಚಿಂತನ ವೇದಿಕೆ ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ ರಿಗೆ ಹಸ್ತಾಂತರ ಮಾಡುವ ಮೂಲಕ ಚಾಲನೆ ನೀಡಿದರು.

ಮಾಜಿ ಸಚಿವ ಎಸ್.ಅಂಗಾರ, ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ, ಪದ್ಮಶ್ರೀ ಪುರಸ್ಕೃತ ಗಿರೀಶ್ ಬಾರಧ್ವಾಜ್ ಸಂಘ ಸಂಸ್ಥೆ ಪದಾಧಿಕಾರಿಗಳು, ವಿದ್ಯಾರ್ಥಿಗಳು ಸಹಿತ ಹಲವರಿದ್ದರು.

ನಡಿಗೆ ಸುಳ್ಯ ಗಾಂಧಿನಗರಕ್ಕೆ ತಲುಪಿದ ಬಳಿಕ ಗಾಂಧಿ ಪಾರ್ಕ್ ಉದ್ಘಾಟನೆ ನಡೆಯುವುದು