ಅಡ್ಕಾರು: ಅಂಬಾಡಿಮೂಲೆ ಶ್ರೀ ವಿಷ್ಣುಮೂರ್ತಿ ಮತ್ತು ಗುಳಿಗ ದೈವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಬಾಡಿಮೂಲೆಯಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ವಿಷ್ಣುಮೂರ್ತಿ ಮತ್ತು ಗುಳಿಗ ದೈವಸ್ಥಾನದ ಪ್ರತಿಷ್ಠಾ ಮಹೋತ್ಸವ ಹಾಗೂ ದೈವಗಳ ಕೋಲದ ಆಮಂತ್ರಣ ಪತ್ರಿಕೆಯನ್ನು ಫೆ.24ರಂದು ಬೆಳಿಗ್ಗೆ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಬಿಡುಗಡೆಗೊಳಿಸಲಾಯಿತು.

ಅಂಬಾಡಿಮೂಲೆ ಶ್ರೀ ವಿಷ್ಣುಮೂರ್ತಿ ಮತ್ತು ಗುಳಿಗ ದೈವಸ್ಥಾನದಲ್ಲಿ ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

 ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಜಗನ್ನಾಥ ಬೇರ್ಪಡ್ಕ, ಸಂಯೋಜಕ ನಿವೃತ್ತ ಎ.ಎಸ್.ಐ.  ಭಾಸ್ಕರ ಅಡ್ಕಾರು, ವೈದಿಕ ಸಮಿತಿಯ ಮುಖ್ಯಸ್ಥ ಗಣೇಶ್ ಅಂಬಾಡಿಮೂಲೆ, ಅಧ್ಯಕ್ಷ ಅಶೋಕ ಅಡ್ಕಾರು, ಕಾರ್ಯದರ್ಶಿ  ನವೀನ್ ಕುಮಾರ್ ಅಂಬಾಡಿಮೂಲೆ, ಕೋಶಾಧಿಕಾರಿ ಎ. ಗಂಗಾಧರ ವಿನೋಬನಗರ, ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಾಲಯದ ಮೊಕ್ತೇಸರ ಗುರುರಾಜ್ ಭಟ್ ಅಡ್ಕಾರು, ರಜತ್ ಅಡ್ಕಾರು, ಎ.ಆರ್. ಬಾಬು ಅಡ್ಕಾರು, ಶ್ರೀಮತಿ ಲೀಲಾವತಿ ವಿನೋಬನಗರ, ಶ್ರೀಮತಿ ಕುಸುಮ ಪದವು,  ಬಾಲಕೃಷ್ಣ ಕಾನ ಅಡ್ಕಾರು, ಕರುಣಾಕರ ಅಡ್ಕಾರು, ಹರ್ಷಿತ್ ಪೇರಾಲು,  ಗೋಪಾಲ ಅಡ್ಕಾರುಪದವು, ಕೃಷ್ಣಕುಮಾರ್ ಅಡ್ಕಾರು, ಮೋಕ್ಷಿತ್ ಅಡ್ಕಾರು

ಸೇರಿದಂತೆ ಸಮಿತಿಯ ವಿವಿಧ ಜವಾಬ್ದಾರಿಯ ಪದಾಧಿಕಾರಿಗಳು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.