ಸುಳ್ಯ ರಾಮ ಮಂದಿರದ ಬ್ರಹ್ಮಕಲಶೋತ್ಸವದ ಹಸಿರುವಾಣಿ ಮೆರವಣಿಗೆ- ದೇವರಿಗೆ ಹಿತ್ತಾಳೆಯ ಪ್ರಭಾವಳಿ ಸಮರ್ಪಣೆ

0

ಸುಳ್ಯ ನಗರದ ಶ್ರೀ ರಾಮಮಂದಿರದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಇಂದು ಹಸಿರುವಾಣಿ ಮೆರವಣಿಗೆ ಹಾಗೂ ದೇವರಿಗೆ ನೂತನವಾಗಿ ಸಮರ್ಪಿಸಲಿರುವ ಹಿತ್ತಾಳೆಯ ಪ್ರಭಾವಳಿಯ ಮೆರವಣಿಗೆಯು ಚೆನ್ನಕೇಶವ ದೇವಸ್ಥಾನದ ಎದುರು ಚಾಲನೆ ನೀಡಲಾಯಿತು.
ಮೆರವಣಿಗೆಯು ಸುಳ್ಯದ ಮುಖ್ಯ ರಸ್ತೆಯ ಮೂಲಕ ಮಂದಿರದ ತನಕ ಮಹಿಳೆಯರ ಪೂರ್ಣ ಕುಂಭ ಸ್ವಾಗತದೊಂದಿಗೆ ಚೆಂಡೆ ವಾದನದೊಂದಿಗೆ ಅದ್ದೂರಿಯಾಗಿ ಸಾಗಿ ಬಂತು.


ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಅಂಗಾರ,
ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ, ಮಂದಿರದ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಉಪೇಂದ್ರ ಪ್ರಭು, ಉಪಾಧ್ಯಕ್ಷ ಎಂ ವೆಂಕಪ್ಪ ಗೌಡ, ಗೋಕುಲ್ ದಾಸ್, ವಿನಯಕುಮಾರ್ ಕಂದಡ್ಕ, ಪಿ.ಕೆ.ಉಮೇಶ್, ಬಾಬುರಾಯ ಕಾಮತ್, ಧರ್ಮದರ್ಶಿ ಮಂಡಳಿಯ ಸದಸ್ಯರು, ಹಸಿರುವಾಣಿ ಸಮಿತಿ ಸಂಚಾಲಕ ಪ್ರಕಾಶ್ ಯಾದವ್,
ಉಪ ಸಮಿತಿಯ ಸಂಚಾಲಕರು ಮತ್ತು ಸದಸ್ಯರು ಹಾಗೂ ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.