ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ಮೂರು ದಿನಗಳಿಂದ ತೇಲುತ್ತಿದ್ದ ದನದ ಮೃತದೇಹ

0

ಮೊಸಳೆ ಹಿಡಿದು ಸತ್ತಿರುವ ಶಂಕೆ

ಗೊತ್ತಿದ್ದರೂ ವಿಲೇವಾರಿ ಮಾಡದ ಸ್ಥಳೀಯಾಡಳಿತ

ರವಿಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ದಫನ

ಕುಮಾರಧಾರ ನದಿಯಲ್ಲಿ ನೀರಿನಲ್ಲಿದ್ದ ಕಳೆದ ಮೂರು ದಿನಗಳಿಂದ ಸತ್ತು ತೇಲುತಿದ್ದ ದನವನ್ನು ಮೃತ ದೇಹವನ್ನು ರವಿ ಕಕ್ಕೆ ಪದವು ಸಮಾಜ ಸೇವಾ ತಂಡ ದಫನ ಮಾಡಿದ ಘಟನೆ ಫೆ.೨೭ ರಂದು ವರದಿಯಾಗಿದೆ.


ಸುಬ್ರಹ್ಮಣ್ಯದ ಕುಮಾರಧಾರ ಸ್ಥಾನಘಟ್ಟದ ಬಳಿ ನೀರಿನಲ್ಲಿ ಸತ್ತ ದನ ಮೂರು ದಿನದಿಂದ ತೇಲುತ್ತಾ ಇದ್ದದನ್ನು ಗಮನಿಸಿದ್ದ ಸ್ಥಳೀಯರು ಈ ಬಗ್ಗೆ ಸ್ಥಳೀಯಾಡಳಿತಕ್ಕೆ ಮಾಹಿತಿ ನೀಡಿದ್ದರೂ ಏನೊಂದು ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪ ಕೇಳಿ ಬಂದಿದೆ.

ಇದನ್ನು ಗಮನಿಸಿದ ಡಾ.ರವಿ ಕಕ್ಕೆ ಪದವು ಕೂಡಲೇ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸದಸ್ಯರೊಂದಿಗೆ ಸೇರಿಕೊಂಡು ಫೆ.೨೭ ರಂದು ಮೂರು ದಿನಗಳಿಂದ ಸತ್ತು ವಾಸನೆ ಬರುತ್ತಿದ್ದ ದನವನ್ನು ದಡಕ್ಕೆ ತಂದು ನದಿ ಪಕ್ಕದಲ್ಲಿ ಜೆ.ಸಿ.ಬಿ ಬಳಸಿ ಗುಂಡಿ ತೋಡಿ ದಫನ ಮಾಡಿದ್ದಾರೆ. ಅಲ್ಲದೆ ದನ ಕೊಳೆತು ವಾಸನೆ ಬರುತಿದ್ದ ಕಿಂಡಿ ಅಣೆಕಟ್ಟಿನ ಮೇಲ್ಬಾಗದ ನೀರನ್ನು ಬಿಟ್ಟು ಸ್ವಚ್ಚಗೊಳಿಸಲಾಯಿತು. ಈ ಕಾರ್ಯದಲ್ಲಿ ಡಾ. ರವಿ ಕಕ್ಕೆಪದವು, ಕಾರ್ತಿಕ್ ದೇವರಗದ್ದೆ, ಗೋಪಾಲ್ ಎಣ್ಣೆ ಮಜಲ್ , ಗ್ರಾ.ಪಂ ನ ರಾಮಚಂದ್ರ, ಆನಂದ ಮತ್ತಿತರರು ಸಹಕರಿಸಿದರು.