ಡಿ.ಸಿ.ಸಿ. ಬ್ಯಾಂಕ್ ಚುನಾವಣೆಗೆ ಸಹಕಾರ ಭಾರತಿ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಎಸ್.ಎನ್.ಮನ್ಮಥ ಆಯ್ಕೆ

0

ಡಿಸಿಸಿ ಬ್ಯಾಂಕ್ ಅಭ್ಯರ್ಥಿಯಾಗಿ ಸುಳ್ಯ ಕ್ಷೇತ್ರದ ಸಹಕಾರ ಭಾರತಿ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್‌.ಎನ್‌.ಮನ್ಮಥ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ.


23 ವೋಟರ್ಸ್ ಪವರ್ ಇರುವ ಈ ಚುನಾವಣೆಯಲ್ಲಿ 16 ಸಹಕಾರ ಭಾರತಿ ಹಾಗೂ 7 ಮಂದಿ ಕಾಂಗ್ರೆಸ್ ಬೆಂಬಲಿಗರು ಇದ್ದಾರೆ. ಈ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನವಾಗಿದೆ. ಈ ಸಲ ಎಸ್.ಎನ್. ಮನ್ಮಥ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದು ಬಂದಿದೆ. ಈ ಚುನಾವಣೆ ಐದು ವರ್ಷಕ್ಕೊಮ್ಮೆ ನಡೆಯಲಿದೆ. ಕಳೆದ ಸಲ ಅಡ್ಡ ಮತದಾನ ನಡೆದುದ್ದರಿಂದ ಸಹಕಾರ ಭಾರತಿಗೆ ಸೋಲಾಗಿತ್ತು. ಆದರೆ ಈ ಸಲ ಒಮ್ಮತದ ನಿರ್ಧಾರದಿಂದ ಸಹಕಾರ ಭಾರತಿ ಮತ್ತು ಬಿಜೆಪಿಗೆ ಗೆಲುವಾಗಲಿದೆ ಎಂದು ತಿಳಿದು ಬಂದಿದೆ.