ಯೇನೆಕಲ್ಲಿನಲ್ಲಿ ಶ್ರೀ ಪಿಲಿಭೂತ – ಕುಂಟ್ರಾಂಡಿ ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಹಾಗೂ ನೇಮೋತ್ಸವ

0


ಯೇನೆಕಲ್ಲು ಗ್ರಾಮದ ಪರ್ಲ ಹೊಸಂಗಡಿ ಕೂಡುಕಟ್ಟಿನ ಶ್ರೀ ಪಿಲಿಭೂತ – ಕುಂಟ್ರಾಂಡಿ ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಹಾಗೂ ದೈವಗಳ ನೇಮೋತ್ಸವವು ಮಾ. 2, 3, 4 ರಂದು ನಡೆಯಿತು.

ಮಾ. 2 ರಂದು ಬೆಳಿಗ್ಗೆ ದೇವತಾ ಪ್ರಾಥನೆ, ಆಚಾರ್ಯವರಣ ಸ್ವಸ್ತಿ ಪುಣ್ಯಾಹ, ಮಹಾಗಣಪತಿ ಹೋಮ ಶ್ರೀ ಭಾಗ್ಯ ಐಕ್ಯಮತ್ಯ ಸೂಕ್ತ ಹೋಮ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಸಂಜೆ ದುರ್ಗಾ ಪೂಜೆ. ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಕ್ಷೆಘ್ನ ಹೋಮ, ವಾಸ್ತು ಪೂಜಾ ಬಲಿ, ಪ್ರಕಾರ ಬಲಿ, ವಾಸ್ತು ಪುಣ್ಯಾಹ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಮಾ. 3ರಂದು ಬೆಳಿಗ್ಗೆ ಗಣಪತಿ ಹೋಮ, ಕಲಶ ಪೂಜೆ, ಬೆಳಿಗ್ಗೆ ಗಂಟೆ 10:53 ರ ವೃಷಭ ಲಗ್ನದ ಶುಭಮೂಹೂರ್ತದಲ್ಲಿ ಶ್ರೀ ಪಿಲಿಭೂತ ದೈವ ಹಾಗೂ ಸಪರಿವಾರ ದೈವಗಳ ಪ್ರತಿಷ್ಠೆ ಕಲಶಾಭಿಷೇಕ ಮತ್ತು ತಂಬಿಲ ಸೇವೆ ಹಾಗೂ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಅದೇ ದಿನ ಸಂಜೆ ಬಾಲಾಡಿ ತರವಾಡು ಮನೆಯಿಂದ ಶ್ರೀ ಕುಂಟ್ರಾಂಡಿ ಮತ್ತು ಪುರುಷ ದೈವದ ಭಂಡಾರ ಆಗಮನವಾಯಿತು. ರಾತ್ರಿ ಅಭಿನಂದನಾ ಕಾರ್ಯಕ್ರಮ ನಡೆದು, ಅನ್ನಸಂತರ್ಪಣೆ, ಪಂಜುರ್ಲಿ ದೈವದ ನೇಮ, ಶ್ರೀ ಕುಂಟ್ರಾಂಡಿ ದೈವದ ನೇಮ ನಡೆಯಿತು. ಮಾ. ೪ರಂದು ಬೆಳಿಗ್ಗೆ ಪಿಲಿಭೂತ ದೈವದ ನೇಮ, ಪುರುಷ ದೈವದ ನೇಮ ಪ್ರಸಾದ ವಿತರಣೆ & ಅನ್ನಸಂತರ್ಪಣೆ ನಡೆಯಿತು.
ಪರ್ಲ ಹೊಸಂಗಡಿ ಕೂಡುಕಟ್ಟಿನ ಸಮಸ್ತರು, ಊರ ಹಾಗೂ ಪರವೂರ ಭಕ್ತಾದಿಗಳು ಭಾಗವಹಿಸಿ ದೈವದ ಗಂಧ ಪ್ರಸಾದ ಸ್ವೀಕರಿಸಿದರು.