ಮಾ.8: (ಇಂದು)ಪಂಜದಲ್ಲಿ ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟ

0

ಶ್ರೀ ಶಾರದಾಂಬ ಯಕ್ಷಗಾನ ಭಕ್ತ ವೃಂದ ಪಂಜ ಇದರ ಆಶ್ರಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ರವರಿಂದ ಶ್ವೇತಕುಮಾರ ಚರಿತ್ರೆ -ಅಗ್ರಪೂಜೆ ಎಂಬ ಪುಣ್ಯ ಕಥಾ ಭಾಗವನ್ನು (ಇಂದು)ಮಾ.8 ರಂದು ಸಂಜೆ ಗಂಟೆ 5.30 ರಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವಠಾರದಲ್ಲಿ ಆಡಿ ತೋರಿಸಲಿದ್ದಾರೆ.
ಚೌಕಿಯಲ್ಲಿ ಸಂಜೆ ಗಂಟೆ 5 ಕ್ಕೆ ಶ್ರೀ ದೇವಿಗೆ ಪೂಜೆ ನಡೆಯಲಿದ್ದು ಹೂ ಮತ್ತು ಹಣ್ಣು ಕಾಯಿ ಒಪ್ಪಿಸಲು ಭಕ್ತಾದಿಗಳಿಗೆ ಅವಕಾಶವಿರುತ್ತದೆ. ಎಂದು ಸಂಘಟಕರು ತಿಳಿಸಿದ್ದಾರೆ.