ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ

0

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪೂಜೆಯು ಮಾ.08 ರಂದು ನಡೆಯಿತು.
ಸಂಜೆ ಶತರುದ್ರಾಭಿಷೇಕ,ರಾತ್ರಿ ಮಹಾಪೂಜೆ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಉದಯಕುಮಾರ್ ಕೆ.ಟಿ.ಪೂಜಾ ಕಾರ್ಯ ನೆರವೇರಿಸಿದರು.


ಸಂಜೆ ವಿದುಷಿ ಪ್ರಣತಿ ಚೈತನ್ಯ ಪದ್ಯಾಣ ನಿರ್ದೇಶನದ ಪದಮಾನ ತಂಡದವರಿಂದ ಭರತನಾಟ್ಯ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಸದಸ್ಯರಾದ ವಿಶ್ವನಾಥ ಭಟ್ ಕುರುಂಬುಡೇಲು,ಗಂಗಾಧರ ರೈ ಪುಡ್ಕಜೆ,ಉದಯಪ್ರಸಾದ್ ಅಜಪಿಲ, ಶಮಿತಾ ಪಿ.ರೈ ಪನ್ನೆ, ನವಪ್ರಭಾ ತಂಬಿನಮಕ್ಕಿ, ರಾಧಾಕೃಷ್ಣ ಕುಲಾಲ್, ಚಂದ್ರಕಾಂತ ಗೌರಿಹೊಳೆ ಹಾಗೂ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.