ಗ್ಯಾರಂಟಿ ಫಲಾನುಭವಿಗಳ ಸಮಾವೇಶಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಗೈರು

0

ಕರ್ನಾಟಕ ಸರಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದ ಅಧ್ಯಕ್ಷತೆ ವಹಿಸಬೇಕಿದ್ದ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಸಮಾರಂಭಕ್ಕೆ ಗೈರು ಹಾಜರಾಗಿದ್ದರು.

ಸರಕಾರಿ ಕಾರ್ಯಕ್ರಮವಾದರೂ ಕ್ಷೇತ್ರದ ಶಾಸಕರು ಬಂದಿಲ್ಲ ಯಾಕೆ ಎಂದು ಜನ ಮಾತಾಡಿಕೊಳ್ಳುತ್ತಿದ್ದರು. ಬಿಜೆಪಿ ಶಾಸಕರು ಇರುವ ಇತರ ಕೆಲವು ಕಡೆಗಳಲ್ಲಿ ಶಾಸಕರು ಸಮಾವೇಶಗಳಲ್ಲಿ ಪಾಲ್ಗೊಂಡಿದ್ದರೂ ಸುಳ್ಯದಲ್ಲಿ ಶಾಸಕರು ಭಾಗವಹಿಸದೇ ಇದ್ದದ್ದು ಎದ್ದು ಕಂಡಿತು.