ದುಗ್ಗಲಡ್ಕ ಶ್ರೀ ದುಗ್ಗಲಾಯ ನೇಮೋತ್ಸವಕ್ಕೆ ಗೊನೆ ಮುಹೂರ್ತ

0

ಮಾ.19 ಮತ್ತು 20‌ ರಂದು ವಾರ್ಷಿಕ ಜಾತ್ರೋತ್ಸವ

ದುಗ್ಗಲಡ್ಕದ ಶ್ರೀ ದುಗ್ಗಲಾಯ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ ಮಾ.19 ಮತ್ತು 20 ರಂದು ನಡೆಯಲಿದ್ದು, ಇಂದು ಗೊನೆ ಮುಹೂರ್ತ ನಡೆಯಿತು.


ದೇವಸ್ಥಾನದಲ್ಲಿ ಆನುವಂಶಿಕ ಮೊಕ್ತೇಸರರಾದ ರಾಘವೇಂದ್ರ ಭಟ್ ಕಲ್ದಂಬೆಯವರು ಪ್ರಾರ್ಥನೆ ಸಲ್ಲಿಸಿ,ಅವರ ತೋಟದಿಂದ ಮುಹೂರ್ತದ ಗೊನೆ ಕಡಿಯಲಾಯಿತು.


ಈ ಸಂದರ್ಭದಲ್ಲಿ ದೈವಸ್ಥಾನ ಸಮಿತಿಯ ಅಧ್ಯಕ್ಷರಾದ ಸುಂದರ ರಾವ್ ಕೊಡೆಂಚಡ್ಕ,ಗೌರವಾಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ಕಾರ್ಯದರ್ಶಿ ಕಜೆ ಕುಶಾಲಪ್ಪ ಗೌಡ, ಗುಳಿಗಕಟ್ಟೆ ಸಮಿತಿ ಅಧ್ಯಕ್ಷ ದಿನೇಶ್ ಡಿ.ಕೆ., ಯುವ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ, ದೈವದ ಪೂಜಾರಿಗಳು, ಪದಾಧಿಕಾರಿಗಳಾದ ನಾರಾಯಣ ಮಣಿಯಾಣಿ, ಬಾಬು ಮಣಿಯಾಣಿ, ಶಿವಪ್ರಸಾದ್ ಕುದ್ಪಾಜೆ, ಜಗದೀಶ್ ಅಮೈ, ಹೇಮಂತ ಕುಮಾರ್ ಕಂದಡ್ಕ, ಗಿರಿಧರ ನೆಕ್ರಾಜೆ, ಕೃಷ್ಣಪ್ಪ ಗೌಡ ಕೊಡೆಂಚಡ್ಕ, ಶ್ರೀಧರ ಆಚಾರ್ಯ ಕೆದ್ಕಾನ, ಐತಪ್ಪ ನಾಯ್ಕ ಶಕ್ತಿಗುಡ್ಡೆ, ಮಾಧವ ದುಗ್ಗಲಡ್ಕ, ರೂಪೇಶ್ ನೀರಬಿದಿರೆ, ಕುಂಬೆತ್ತಿಬನ, ದೇವಪ್ಪ ಆಚಾರ್ಯ ಕೆದ್ಕಾನ, ಸೀತಾರಾಮ ಈಶ್ವರಡ್ಕ, ನಾರಾಯಣ ಕಲಾಪ್ರಿಯ, ಗಿರೀಶ್ ಮೂಡೆಕಲ್ಲು, ಜಯರಾಮ ಕಲಾಪ್ರಿಯ, ಸಂದೀಪ್ ದುಗ್ಗಲಡ್ಕ, ಬಾಬು ದುಗ್ಗಲಡ್ಕ, ಕುಸುಮಾಧರ ಎಸ್‌.ಎನ್., ಮನ್ಮಥ ಕೆದ್ಕಾನ, ಮೋಹನ ಕೊಯಿಕುಳಿ, ಲೋಹಿತ್ ಮಾಣಿಬೆಟ್ಟು, ಕೃಷ್ಣಕುಮಾರ್ ಕಂದಡ್ಕ, ರಮೇಶ್ ನೀರಬಿದಿರೆ ಮೊದಲಾದವರು ಉಪಸ್ಥಿತರಿದ್ದರು.