ಮಾಣಿ -ಕೋಡಾಜೆಯಲ್ಲಿ ಆ್ಯಕ್ಟೀವಾ – ಕಾರು ಅಪಘಾತ: ಬೆಳ್ಳಿಪ್ಪಾಡಿಯ ಇಬ್ಬರಿಗೆ ಗಾಯ

0

ಮಂಗಳೂರಿನ ಆಸ್ಪತ್ರೆಗೆ ದಾಖಲು

ಕಾರು ಮತ್ತು ಆ್ಯಕ್ಟೀವಾ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಜಾಲ್ಸೂರು ಸಮೀಪದ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿಯ ಇಬ್ಬರು ಮಹಿಳೆಯರು ಗಾಯಗೊಂಡು, ಮಂಗಳೂರಿನ ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ತಾಲೂಕಿನ ಮಾಣಿ-ಕೊಡಾಜೆ ಎಂಬಲ್ಲಿ ಮಾ.11ರಂದು ಅಪರಾಹ್ನ ಸಂಭವಿಸಿದೆ.

ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿಯ ದಿ. ಹುಕ್ರಪ್ಪ ಪೂಜಾರಿ ಅವರ ಪುತ್ರಿ ಚೈತ್ರ ಅವರಿಗೆ ಸದ್ಯದಲ್ಲೇ ವಿವಾಹವಿದ್ದು, ಮಾ.11ರಂದು ಬೆಳಿಗ್ಗೆ
ಹುಕ್ರಪ್ಪ ಪೂಜಾರಿ ಅವರ ಪುತ್ರ ಕಿಶೋರ್ , ಇಬ್ಬರು ಪುತ್ರಿಯರಾದ ವಿದ್ಯಾ ಮತ್ತು ಚೈತ್ರ ಸೇರಿದಂತೆ ಮೂವರು ಕಾರಿನಲ್ಲಿ ಮಂಗಳೂರಿಗೆ ಹೋಗಿ ಮದುವೆ ಬಟ್ಟೆ ಖರೀದಿಸಿ, ಹಿಂತಿರುಗುತ್ತಿದ್ದ ವೇಳೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ – ಕೋಡಾಜೆ ಎಂಬಲ್ಲಿ ಮುಂಭಾಗದಿಂದ ಬರುತ್ತಿದ್ದ ಆ್ಯಕ್ಟೀವಾಗೆ ಕಾರು ಢಿಕ್ಕಿಯಾಗಿದ್ದು, ಚೈತ್ರ ಹಾಗೂ ವಿದ್ಯಾ ಅವರಿಗೆ ಸಣ್ಣಪುಟ್ಟ ಗಾಯ ಹಾಗೂ
ಆ್ಯಕ್ಟೀವಾದಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರೆಲ್ಲರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿದೆ.