ಅಡ್ಕಾರು: ಅಂಬಾಡಿಮೂಲೆ ಶ್ರೀ ವಿಷ್ಣುಮೂರ್ತಿ – ಗುಳಿಗ ದೈವದ ಪುನರ್ ಪ್ರತಿಷ್ಠಾ ಉತ್ಸವಕ್ಕೆ ಗೊನೆ ಮುಹೂರ್ತ

0

ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಬಾಡಿಮೂಲೆ ಶ್ರೀ ವಿಷ್ಣುಮೂರ್ತಿ ಮತ್ತು ಗುಳಿಗ ದೈವಸ್ಥಾನದ ಪುನರ್ ಪ್ರತಿಷ್ಠಾ ಉತ್ಸವ ಹಾಗೂ ದೈವಗಳ ಕೋಲವು ಮಾ.21ರಿಂದ 23ರವರೆಗೆ ಜರುಗಲಿದ್ದು, ಗೊನೆ ಮುಹೂರ್ತ ಕಾರ್ಯವು ಮಾ.15ರಂದು ಬೆಳಿಗ್ಗೆ ಜರುಗಿತು.

ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಜಗನ್ನಾಥ ಬೇರ್ಪಡ್ಕ, ಅಧ್ಯಕ್ಷ ಅಶೋಕ ಅಡ್ಕಾರು, ಸಂಯೋಜಕ ಭಾಸ್ಕರ ಅಡ್ಕಾರು, ಕಾರ್ಯದರ್ಶಿ ನವೀನ ಅಂಬಾಡಿಮೂಲೆ, ಕೆ.ಪಿ. ಶಿವಪ್ರಸಾದ್ ಬೊಳುಬೈಲು, ಕೋಶಾಧಿಕಾರಿ ಎ. ಗಂಗಾಧರ ವಿನೋಬನಗರ, ಎ.ಆರ್. ಬಾಬು ಅಡ್ಕಾರು ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.