ಎಲಿಮಲೆ ನುಸ್ರತ್ ವತಿಯಿಂದ ರಮಳಾನ್ ಕಿಟ್-ವಸ್ತ್ರ ವಿತರಣೆ, ಗ್ರಾಂಡ್ ಇಫ್ತಾರ್ ಮೀಟ್

0

ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಎಲಿಮಲೆ ಇದರ ವತಿಯಿಂದ ಮಾಜಿ ಮುದರಿಸರೂ ಹಿರಿಯ ವಿದ್ವಾಂಸರೂ ಆದ ಪಿ.ಟಿ. ಉಸ್ತಾದ್ ರವರ ಆಂಡ್ ಪ್ರಯುಕ್ತ ಅಗಲಿದ ಉಲಮಾ ಉಮರಾ ನಾಯಕರ ಅನುಸ್ಮರಣೆ,ರಮಳಾನ್ ಕಿಟ್ ವಿತರಣೆ,ವಸ್ತ್ರ ವಿತರಣೆ ಹಾಗೂ ಬೃಹತ್ ಇಪ್ತಾರ್ ಕೂಟ ಕಾರ್ಯಕ್ರಮ ನುಸ್ರತ್ ರೂಬಿ ಜುಬಿಲಿ ಕಛೇಯಲ್ಲಿ ನಡೆಯಿತು.

ಎಲಿಮಲೆ ಮುದರಿಸರಾದ ಅಹ್ಮದ್ ರಿಫಾಯೀ ತಂಙಳ್ ಕೋಝಿಕ್ಕೊಡು ರವರು ತಹ್ಲೀಲ್ ಸಮರ್ಪಣೆ ಹಾಗೂ ದುವಾ ಪ್ರಾರ್ಥನೆ ಗೆ ನೇತೃತ್ವ ವಹಿಸಿದರು..
ಮಹಮೂದ್ ಸಖಾಫಿಯವರು ಉಲಮಾ ಉಮರಾ ಅನುಸ್ಮರಣಾ ಭಾಷಣಗೈದರು.
ಜಮಾಅತ್ ಅಧ್ಯಕ್ಷ ಅಬ್ದುಲ್ ಕಾದರ್ ಪಾಣಾಜೆಯವರು ಜಮಾಅತಿಗೊಳಪಟ್ಟ ಬಡ ಕುಟುಂಬಗಳಿಗೆ ರಮಳಾನ್ ಕಿಟ್ ವಿತರಿಸಿದರು.
ಎಲಿಮಲೆಯ ಮಹಲಿನ ಉಸ್ತಾದರಿಗೆ, ಮುತಅಲ್ಲಿಮರಿಗೆ, ದರ್ಸ್ ವಿಧ್ಯಾರ್ಥಿಗಳು ಹಾಗೂ ಮಸೀದಿಗಳಲ್ಲಿ ಸೇವೆಗೈಯುತ್ತಿರುವ ಉಸ್ತಾದರುಗಳಿಗೆ ವಸ್ತ್ರ ವಿತರಣೆಯನ್ನು ನುಸ್ರತ್ ಅಧ್ಯಕ್ಷ ಲತೀಫ್ ಹರ್ಲಡ್ಕ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಜೀರ್ಮುಕಿ ಮಸೀದಿ ಅಧ್ಯಕ್ಷರಾದ ಅಬ್ದುಲ್ಲ ಜಿ ಎಸ್,
ಜಮಾಅತ್ ಕಮಿಟಿಯ ಸದಸ್ಯ ಸೂಫಿ ಮುಸ್ಲಿಯಾರ್, ಜಮಾಅತ್ ಕಾರ್ಯದರ್ಶಿ ಸಿದ್ದೀಕ್ ಎಲಿಮಲೆ,
ನುಸ್ರತ್ ಉಪಾಧ್ಯಕ್ಷರಾದ ಹೈದರ್ ಹಾಜಿ. ಅಬ್ದುಲ್ ಕಾದರ್ ಅತ್ತಿಮಾರಡ್ಕ, ಜಮಾಅತ್ ಕೋಶಾಧಿಕಾರಿ ಇಬ್ರಾಹಿಂ,
ಜೀರ್ಮುಕ್ಕಿ ಮಸೀದಿ ಕಾರ್ಯದರ್ಶಿ ಅಶ್ರಫ್ ಜಿ.ಎ.ಕೆ , ಎಲಿಮಲೆ ಮದ್ರಸ ಮುಖ್ಯೋಪಾಧ್ಯಾಯರಾದ ಫೈಝಲ್ ಸಖಾಫಿ, ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್ ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ , ನುಸ್ರತ್ ಗಲ್ಫ್ ಪ್ರತಿನಿಧಿ ಹಾರಿಸ್ ಪಳ್ಳಿಕಲ್, ಕೋಶಾಧಿಕಾರಿ ಬಾತಿಶಾ ಯೂಸುಫ್ ಉಪಸ್ಥಿತರಿದ್ದರು
ನಂತರ ನಡೆದ ಬ್ರಹತ್ ಇಫ್ತಾರ್ ಸಂಗಮದಲ್ಲಿ ನೂರಾರು ಉಪವಾಸಿಗರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲತೀಫ್ ಹರ್ಲಡ್ಕ ರವರು ವಹಿಸಿದ್ದರು.
ಕಾರ್ಯದರ್ಶಿ ನಾಸಿರ್ ಸ್ವಾಗತಿಸಿ ವಂದಿಸಿದರು