ಪಂಬೆತ್ತಾಡಿ: ಆಧಾರ್ ತಿದ್ದುಪಡಿ ಶಿಬಿರ

0

ಚಿಗುರು ಗೆಳೆಯರ ಬಳಗ ಪಂಬೆತ್ತಾಡಿ ಮತ್ತು ಭಾರತೀಯ ಅಂಚೆ ಇಲಾಖೆ ಸಹಯೋಗದೊಂದಿಗೆ ಆಧಾರ್ ತಿದ್ದುಪಡಿ ಶಿಬಿರ ಮಾ.17 ರಂದು ಪಂಬೆತ್ತಾಡಿ ಸ.ಹಿ ಪ್ರಾ.ಶಾಲೆಯಲ್ಲಿ ನಡೆಯಿತು.

ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಉದ್ಘಾಟಿಸಿ ಶುಭಹಾರೈಸಿದರು.
ಚಿಗುರು ಗೆಳೆಯರ ಬಳಗದ ಶ್ರೀನಿವಾಸ್ ಬಿ ಸಭಾಧ್ಯಕ್ಷತೆ ವಹಿಸಿದ್ದರು.

ಎಸ್ .ಡಿ .ಎಂ. ಸಿ ಅಧ್ಯಕ್ಷ ಸತ್ಯಶಂಕರ ಕಲ್ಚಾರ್ , ರಾಷ್ಟ್ರೀಯ ಅಂಚೆ ನೌಕರರ ಸಂಘ ಪುತ್ತೂರು ಇದರ ಅಧ್ಯಕ್ಷ ಆನಂದ ಗೌಡ ಚೆನ್ನಕಜೆ, ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಾಲಕೃಷ್ಣ ಕೋಟೆಗುಡ್ಡೆ ಪ್ರಾರ್ಥಿಸಿದರು.ಅಶ್ವತ್ ಬಾಬ್ಲುಬೆಟ್ಟು ಸ್ವಾಗತಿಸಿದರು ಮತ್ತು ನಿರೂಪಿಸಿದರು.
ಶರಣ್ಯ ಕುಮಾರ್ ಮಡಪ್ಪಾಡಿ
ವಂದಿಸಿದರು. ಸುಮಾರು 110 ಜನ ಆಧಾರ್ ತಿದ್ದುಪಡಿ ಶಿಬಿರದ ಪ್ರಯೋಜನ ಪಡೆದರು.