ಪಂಜ: ಯುವಕ -ಯುವತಿ ಮಂಡಲಗಳ ಪದಸ್ವೀಕಾರ ಸಮಾರಂಭ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

0

ಜೈ ಕರ್ನಾಟಕ ಯುವಕ ಮಂಡಲ , ಮತ್ತು ಕೃಪಾ ಯುವತಿ ಮಂಡಲ ಐವತ್ತೊಕ್ಲು ಪಂಜ ಇದರ ನೂತನ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಮಾ.17 ರಂದು ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು, ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಅರ್ಚಕ ವಿಪ್ರಜ ಪೈಂದೋಡಿ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.

ಸಭಾಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಕೇಶವ ಕೋಟ್ಯಡ್ಕ ವಹಿಸಿದ್ದರು.
ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಪವನ್ ಪಲ್ಲತ್ತಡ್ಕ ಪ್ರಮಾಣವಚನ ಬೋಧಿಸಿದರು.

ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ವನಿತಾ ಕರಿಮಜಲು, ಕಾರ್ಯದರ್ಶಿ ಶ್ರೀಮತಿ ಶಿಲ್ಪಾ ಕೋಟ್ಯಡ್ಕ, ಯುವಕ ಮಂಡಲದ ನೂತನ ಅಧ್ಯಕ್ಷ ವಿದ್ಯಾನಂದ ಮೇಲ್ಮನೆ, ಕಾರ್ಯದರ್ಶಿ ಶೈಲೇಶ್ ಕೋಟ್ಯಡ್ಕ, ನೂತನ ಕಾರ್ಯದರ್ಶಿ ಗಣೇಶ್ ಕರಿಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳು: ಯುವಕ ಮಂಡಲದ ಅಧ್ಯಕ್ಷರಾಗಿ ವಿದ್ಯಾನಂದ ಮೇಲ್ಮನೆ, ಕಾರ್ಯದರ್ಶಿಯಾಗಿ ಗಣೇಶ್ ಕರಿಮಜಲು ,ಖಜಾಂಜಿಯಾಗಿ ಜಗದೀಶ್ ಕೋಟಿಯಡ್ಕ, ಸಾಂಸ್ಕೃತಿಕ ಮನ್ವಿತ್ ಬನ, ಕ್ರೀಡಾ ಲಿತಿನ್ ಬನ, ಭಜನೆ ಸಂಘಟಕ ಸಚಿನ್ ಬನ, ಸಂಘಟನಾ ಕಾರ್ಯದರ್ಶಿ ನಿತಿನ್ ತೋಟ, ಉಪಾಧ್ಯಕ್ಷರಾಗಿ ಶರತ್ ಕೋಡಿ, ಯುವತಿ ಮಂಡಲದ ಅಧ್ಯಕ್ಷರಾಗಿ ಶ್ರೀಮತಿ ಚಂದ್ರಕಲಾ ಶೀರಾಜೆ, ಕಾರ್ಯದರ್ಶಿಯಾಗಿ ಶ್ರೀಮತಿ ಧನ್ಯ ಕೋಡಿ, ಖಜಾಂಜಿಯಾಗಿ ಶ್ರೀಮತಿ
ಕಾವ್ಯ ಅಳ್ಪೆ, ಕ್ರೀಡಾ ಶ್ರೀಮತಿ ವೀಣಾ ಕೋಡಿ, ಸಾಂಸ್ಕೃತಿಕ ಶ್ರೀಮತಿ
ಕಮಲಾಕ್ಷಿ ಶೇಡಿಗುಂಡಿ, ಉಪಾಧ್ಯಕ್ಷರಾಗಿ
ಶ್ರೀಮತಿ ಸತ್ಯವತಿ ಶೇಡಿಗುಂಡಿ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ದೇವಿಪ್ರಸಾದ್ ಕಡಪಲ ಪ್ರಾರ್ಥಿಸಿದರು.ನಾರಾಯಣ ಶೀರಾಜೆ ಸ್ವಾಗತಿಸಿದರು. ಗುರು ಪ್ರಸಾದ್ ತೋಟ ನಿರೂಪಿಸಿದರು.ಪ್ರಕಾಶ್ ಅಳ್ಪೆ ಪ್ರಾಸ್ತಾವಿಕ ಗೈದರು. ವನಿತಾ ಕರಿಮಜಲು ವಂದಿಸಿದರು.
ಮುಂಜಾನೆ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಪೈಂದೋಡಿ ಶ್ರೀ ಸುಬ್ರಾಯ ದೇವಾಲಯದ ಪ್ರಧಾನ ಅರ್ಚಕ ವಿಷ್ಣು ಪೈಂದೋಡಿ ರವರ ನೇತೃತ್ವದಲ್ಲಿ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.