ಎ. 13- ಎ. 18 : ಹಳೆಗೇಟಿನ ಕೇಶವ ಕೃಪಾದಲ್ಲಿ ಸಂಸ್ಕಾರ ವಾಹಿನಿ- 2024 ಶಿಬಿರ

0

ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ವಿದ್ಯಾನಗರ ಹಳೆಗೇಟು ಸುಳ್ಯ ಇದರ ಆಶ್ರಯದಲ್ಲಿ ಸುಳ್ಯದ ಹಳೆಗೇಟಿನಲ್ಲಿರುವ ಕೇಶವ ಕೃಪಾದಲ್ಲಿ ಸಂಸ್ಕಾರ ವಾಹಿನಿ- 2024 4ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ವಿಶೇಷ ಶಿಬಿರವು ಎ.13ರಿಂದ ಆರಂಭಗೊಂಡು ಎ. 18ರವರೆಗೆ ನಡೆಯಲಿರುವುದು.

ರಾಜ್ಯದ ಪ್ರಸಿದ್ದ ವೇದ ವಿದ್ವಾಂಸರು ಹಾಗೂ ಕಲಾತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ಶ್ಲೋಕಗಳು, ವೇದ ಮಂತ್ರಗಳು, ಭಗವದ್ಗೀತಾ, ಯೋಗ, ನಿತ್ಯೋಪಯೋಗಿ ಸಂಸ್ಕೃತ ಶ್ಲೋಕಗಳು. ಸಹಸ್ರನಾಮಗಳು, ಭಜನೆ ಉಪನ್ಯಾಸ, ಪೌರಾಣಿಕ, ಐತಿಹಾಸಿಕ ಕಥೆಗಳು, ಸಂಸ್ಕೃತ ಸುಭಾಷಿತಗಳು, ಸಂಸ್ಕಾರ ಮಾಹಿತಿಗಳು, ರಂಗಗೀತೆಗಳು, ಚಿತ್ರಕಲೆ, ಜಾದೂ ಹಾಗೂ ಮಿಮಿಕ್ರಿ, ವಿವಿಧ ಆಟಗಳು, ಗ್ರೀಟಿಂಗ್ಸ್ ಕಾರ್ಡು ರಚನೆ ಇನ್ನೂ ಹಲವಾರು ಮಕ್ಕಳಿಗೆ ಕಲಿಸಿಕೊಡಲಾಗುವುದು.

ಪ್ರತಿದಿನ ಬೆಳಿಗ್ಗೆ ಗಂಟೆ 8-45ರಿಂದ ಸಂಜೆ 5-00ರ ತನಕ, ಊಟ, ಉಪಾಹಾರ, ಪಾಠ – ಪ್ರವಚನ ಸಂಪೂರ್ಣ ಉಚಿತ, ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಕೊನೆಯ ದಿನಾಂಕ 10-04-2024, ಸೀಮಿತ ಅವಕಾಶ, ಅರ್ಜಿ ಫಾರಂ, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ ಶ್ರೀದೇವಿ ನಾಗರಾಜ ಭಟ್ ಸಂಚಾಲಕಿ, ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಸುಳ್ಯ ಇಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.