ಕೇನ್ಯ: ಕಾಯಂಬಾಡಿಯಲ್ಲಿ ಕಬಡ್ಡಿ ಪಂದ್ಯಾಟ

0

ಕೇನ್ಯ ಗ್ರಾಮದ ಕಾಯಂಬಾಡಿಯಲ್ಲಿ ಹೊನಲು ಬೆಳಕಿನ 65 ಕೆ. ಜಿ. ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಮಾ. 28 ರಂದು ನಡೆಯಿತು. ಪಂದ್ಯಾಟವನ್ನು ಮಾಧವ ಗೌಡ ಬೇರ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಯುವರಾಜ್ ಕಣ್ಕಲ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೇಯಂಸ್ ಕುಮಾರ್ ಶೆಟ್ಟಿಮೂಲೆ, ರಘುನಾಥ್ ರೈ ಕೆರೆಕ್ಕೋಡಿ, ಪದ್ಮನಾಭ ರೈ ಆಗೋಲಿಬೈಲು ಗುತ್ತು, ಮನು. ಎಂ. ತೊಂಡಚ್ಚನ್ ಇಂಡಸ್ಟ್ರೀಸ್ ಪಂಜ, ಸತ್ಯನಾರಾಯಣ ಭಟ್ ಕಾಯಂಬಾಡಿ,
ಭರತ್ ಕೊಳಂಬೆ ಭಾಗವಹಿಸಿದ್ದರು. ಬೆಂಗಳೂರು
ಹೈ ಕೋರ್ಟ್ ನ್ಯಾಯವಾದಿ ತೇಜಸ್ ಕುಮಾರ್ ರೈ ಗೆಜ್ಜೆ
ಕಬಡ್ಡಿ ಅಂಕಣವನ್ನು ಉದ್ಘಾಟಿಸಿದರು. ಸ್ಥಳೀಯ ಪ್ರಾಥಮಿಕ ಶಾಲಾ ಮಕ್ಕಳಿಂದ ಪ್ರದರ್ಶನ ಪಂದ್ಯಾಟ ನಡೆಯಿತು. ಕಣ್ಕಲ್ ಶಾಲಾ ಮಕ್ಕಳು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನೇಮಿರಾಜ್ ಪಲ್ಲೋಡಿ( ಸಹಕಾರಿ ಕ್ಷೇತ್ರ ), ಬಾಲಕೃಷ್ಣ ರೈ ಬಿರ್ಕಿ(ಕ್ರೀಡಾ ಕ್ಷೇತ್ರ ), ರವಿ ಕೊಠಾರಿ(ಭಾರತೀಯ ಸೇನೆ ), ವಿನೋದ್ ಬೊಲ್ಮಳೆ(ಸಮಾಜ ಸೇವೆ )ಯವರನ್ನು ಸನ್ಮಾನಿಸಲಾಯಿತು. ಗೆಳೆಯರ ಬಳಗದ ಅಧ್ಯಕ್ಷರಾದ ಪ್ರಶಾಂತ್ ಕಾಯಂಬಾಡಿ ಸ್ವಾಗತಿಸಿ, ಕಾರ್ಯದರ್ಶಿ ವಿಶ್ವನಾಥ ಕಾಯಂಬಾಡಿ ವಂದಿಸಿದರು. ಗೌರವ ಅಧ್ಯಕ್ಷರಾದ ದೇವಿಪ್ರಸಾದ್ ರೈ ಗೆಜ್ಜೆ ಕಾರ್ಯಕ್ರಮ ನಿರೂಪಿಸಿದರು.